ಆಕಾರವೇ ಭಕ್ತ
ನಿರಾಕಾರವೇ ಮಹೇಶ್ವರ
ಸಹಕಾರವೇ ಪ್ರಸಾದಿ
ಸನ್ಮತ ಈಗಲೇ ಪ್ರಾಣಲಿಂಗಿ
ಲೋಕವಿರಹಿತನೇ ಶರಣ
ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯ.
ಅದು ಎಂತು ಎಂದರೆ :
ಪೃಥ್ವಿ ಈಗಲೇ ಭಕ್ತ
ಅಪ್ಪು ಈಗಲೇ ಮಹೇಶ್ವರ
ಅಗ್ನಿ ಈಗಲೇ ಪ್ರಸಾದಿ
ವಾಯು ಈಗಲೇ ಪ್ರಾಣಲಿಂಗಿ
ಆಕಾಶ ಈಗಲೇ ಶರಣ
ಈ ಪಂಚತತ್ವದ ಒಳಗೆ
ಬೆಳಕು ಕತ್ತಲೆ ಐಕ್ಯವು.
ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯಾ
ನಿಮ್ಮ ಶರಣ ಪಂಚತತ್ವದ ಒ?ಗೆ
ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ನೀವು ಕೇಳಿರೊ.