ದೇಹ ಎರಡರಲ್ಲಿ ಭಾವ ಒಂದಾಗದವ ಪ್ರಾಣಂಗಿಯಲ್ಲ.
ದೇಹ ಮೂರರಲ್ಲಿ ಸಾಕ್ಷಿ ತಾನಾಗದವ ಪ್ರಾಣಂಗಿಯಲ್ಲ.
ದೇಹ ನಾಲ್ಕರಲ್ಲಿ ನಿದ್ರ್ವಂದ್ವ ಅಸಾಕ್ಷಿಕ ತಾನಾಗದವ
ಪ್ರಾಣಲಿಂಗಿಯಲ್ಲ.
ಈ ಛಂದವ [ನುಅ]ನಿಂದೆಯೆಂದೆನಾಗಿ.
ಚೆನ್ನಬಸವನ ಗುರುಮೂರ್ತಿಯಿಂದ,
ಆತನ ಒಕ್ಕುದ ಮಿಕ್ಕುದ ಕಾಯ್ದುಕೊಂಡಿಪ್ಪಾತನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.