ಎಲುವೆಂಬ ಹಂಜರ ಥಟ್ಟಾಗಿ,
ಉಭಯವ ಘಟಿಸಿದ ತೊಗಲು
ಬ್ರಹ್ಮವೆಂಬ ಅಳಿಲೆಯ ಕಾಯಲ್ಲಿ
ವಿಷ್ಣುವೆಂಬ ನೀರ ಹೊಯಿದು,
ರುದ್ರನೆಂಬ ಚೂರ್ಣದಲ್ಲಿ ಖಾರಕ್ಕೆ ಮೆಟ್ಟಲಾಗಿ,
ತೊಗಲ ಹೊಲಸು ಕೆಟ್ಟಿತ್ತು, ಹರುಗುಲ ಹುದಿಗಿತ್ತು.
ವರ್ತನವೆಂಬ ಹುಟ್ಟ ಹಿಡಿದು,
ಮಾಟಕೂಟವೆಂಬ ಹೊಳೆಯಲ್ಲಿ ಕೂಟದವರು ದಾಟುತ್ತಿದ್ದಾರೆ, ಎಂದನಂಬಿಗ
ಚೌಡಯ್ಯ.