ಆಜ್ಯೆಪೂಜೆಯೆಂತಿದ್ದರೇನು, ಮನದ ಓಜೆ ನೆಲೆಗೊಳ್ಳದನ್ನಕ್ಕ?
ಜಲ ಚಾಂಡಾಲವಾದರೆ ತಾವರೆ ನೆಲೆಗೊಂಬುದೇ?
ಮನ ಚಾಂಡಾಲವಾದರೆ ಲಿಂಗ ನೆಲೆಗೊಂಬುದೇ?
ಭಾವವಿಟ್ಟ ಕರುವಿನಂತೆ, ಅಲ್ಲಿಪ್ಪನೆ ಶಿವನು?
ಥಳಥಳಿಸದು, ಹೊಳೆಹೊಳೆಯದು, ಕೆರಕು ಕಲ್ಲಿನಂತೆ ಇಪ್ಪುದಯ್ಯಾ
ಪರುಷವು.
ಆ ಪರುಷದಂತುವನಾರು ಬಲ್ಲರು?
ಹೆಮ್ಮೆಗೆರಗುವರಲ್ಲದೆ ಆ ಘನವನೆತ್ತಬಲ್ಲರು?
ಕೂಡಲಚೆನ್ನಸಂಗನ ಶರಣರ ಅಂತಕ ಬೊಂತಕರೆನಬೇಡ,
ಅವರಂತುವನಾ ಶಿವನೇ ಬಲ್ಲ.