ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ ?ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ವಿಷಯವನತಿಗಳೆದಲ್ಲಿ ಫಲವೇನೊ ?ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು_ಗುಹೇಶ್ವರಾ
ಋಣ ತಪ್ಪಿದ ಹೆಂಡಿರಲ್ಲಿಗುಣ ತಪ್ಪಿದ ನಂಟರಲ್ಲಿಜೀವವಿಲ್ಲದ ದೇಹದಲ್ಲಿ ಫಲವೇನೋ?ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿವರವಿಲ್ಲದ ದೈವದಲ್ಲಿ ಫಲವೇನೋ?ಕಳಿದ ಹೂವಿನಲ್ಲಿ ಕಂಪನುಉಳಿದ ಸೊಳೆಯಲ್ಲಿ ಪೆಂಪನುಕೊಳೆಚೆನೀರಿನಲ್ಲಿ ಗುಣವನರಸುವಿರಿ!ಮರುಳೆ ವರಗುರು ವಿಶ್ವಕ್ಕೆಲ್ಲಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ
ಜಾತಿವಿಡಿದು ಸೂತಕವನರಸುವೆಜ್ಯೋತಿವಿಡಿದು ಕತ್ತಲೆಯನರಸುವೆ !ಇದೇಕೊ ಮರುಳುಮಾನವಾಜಾತಿಯಲ್ಲಿ ಅಧಿಕನೆಂಬೆ !ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ`ಭಕ್ತನೆ ಶಿಖಾಮಣ' ಎಂದುದು ವಚನ.ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,ಕೆಡಬೇಡ ಮಾನವಾ.