ಮೇಘಮಂಡಲದರಸನು ಅನುರಸದರಸಿಯ ಮೈಯಲ್ಲಿ ತಾಗಿ
ಒದಗಿದನುಮಿಷ ರತ್ನಪ್ರಭೆಯ ನೋಡುವಡೆ
ಇಪ್ಪತ್ತೈದು ನೂರೆಂಟರ ಮಧ್ಯ [ತುಗಿ]ವ ಸಮಾಧಿ[ಕೆ]
ತಾರಾಮತ್ಸ್ಯದ ಆನೆಯ ಕುಂಬಸ್ಥಳದ [ಜ]ವನಿಕೆಯ ಮೇಲೆ
ಜಾಣ ನಿಟ್ಟಿಸಬಲ್ಲಡೆ ಹೇಳಾ.
ಕನ್ನದುಳಿಯ ಕೆಂಪನು ತನ್ನ ಕೈಯಲ್ಲಿ ಕೊಟ್ಟಡೆ
ಬಿನ್ನಣದ ಕಳವು ಹೇಳಾ.
ತನ್ನ ಮನೆಯಲ್ಲಿ ಕರ್ಣಚಕ್ರಪತ್ರವನಿರಿಸಿದಡೆ ನಿನ್ನಳವೆ ?
ಲೋಕದೊಳು ಬಲ್ಲ ಜಾಣರು.
ಆ [ಹ]ಣ್ಣಿನೊಳಗಣ ಪದ್ಮದೆಸಳೆಸಳು ಕಮ್ಮೇರಿ
ದೇವ ಬಳ್ಳೇಶ್ವರನ ಅನುಭಾವದ ಸರಿದೊಡಕು.