ಶ್ರೀಗುರು ವೀರಸಂಗಮನ ಬಣ್ಣಿಸುವುದೆಂತು ಸಾಧ್ಯವೋ ?
ಸೂಳೆಯ ಮನೆಯಲ್ಲುಂಡು ಅವಳ ದೀಕ್ಷೆಯಗೈದು
ಶಿವಶರಣೆಯನ್ನಾಗಿ ಮಾಡಿದ ;
ಕಾಟುಗನ ಮನೆಯಲ್ಲುಂಡು
ಅವನ ಜಂಗಮದಾಸೋಹಿಯಾಗಿ ಮಾಡಿದ ;
ವೈರಿ ಭಾಸ್ಕರಂಗೆ ಲಿಂಗದೀಕ್ಷೆಯ ತೆತ್ತು
ಮೈದುನನನ್ನಾಗಿ ಮಾಡಿಕೊಂಡ ;
ಮೃತಪಟ್ಟವಂಗೆ ಮರಳಿ ಪ್ರಾಣವ ತೆತ್ತ
ಪರುಷದ ಪುತ್ಥಳಿ ಪತಿತ ಪಾವನಮೂರ್ತಿ
ಶ್ರೀಗುರು ವೀರಸಂಗಯ್ಯನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಬಸವಣ್ಣ.