ವಚನಾರ್ಥವನರಿದು ನುಡಿದಿಹೆನೆಂದಡೆ,
ರಚನೆಯ ರಂಜನೆಗೆ ಒಳಗಾಯಿತ್ತು.
ತತ್ವವನಟ್ಟೈಸಿಹೆನೆಂದಡೆ
ಆತ್ಮಘಾತಕ ಭೂತಸಿದ್ಧಿಗೊಳಗಾಯಿತ್ತು.
ಸರ್ವವೂ ತಾನೆಂದರಿದವಗೆ ಸಂದೇಹಸೂತಕವಿಲ್ಲ.
ಅರಿವು ಆತ್ಮನಲ್ಲಿ ವೇದ್ಯವಾದವಗೆ
ಆ ಸರ್ವವೂ ಅಹುದಲ್ಲಾಯೆಂದು ನಿಂದ ಮತ್ತೆ
ಮಾರ್ಪೊಳಲನೇರಿದ ಧೀರನಂತಿರಬೇಡವೆ ಪರಮವಿರಕ್ತಿ.
ಲೋಲಿಯ......ದಂತೆ, ಜೋಲಿಯ ಕೀಲಿನಂತೆ
ಗ್ರಂಥಿಯ ಗಸಣದಂತಿಪ್ಪವರ ಕಂಡೆನಗೆ ಹೇಸಿಕೆಯಾಯಿತ್ತು.
ಪರತತ್ವಪ್ರಕಾಶ ಚೆನ್ನ ರಾಮೇಶ್ವರಲಿಂಗವನರಿವುದಕ್ಕೆ
ಅಹುದೋ, ಅಲ್ಲವೋ ಎನುತಿರ್ದೆನು.