ಬ್ರಾಹ್ಮಣ ಶಿವಭಕ್ತನಾದ ಬಳಿಕ ಬ್ರಾಹ್ಮಣರ ಬೆರಸಲಾಗದು.
ಕ್ಷತ್ರಿಯ ಶಿವಭಕ್ತನಾದ ಬಳಿಕ ಕ್ಷತ್ರಿಯರ ಬೆರಸಲಾಗದು.
ವೈಶ್ಯ ಶಿವಭಕ್ತನಾದ ಬಳಿಕ ವೈಶ್ಯರ ಬೆರಸಲಾಗದು.
ಶೂದ್ರ ಶಿವಭಕ್ತನಾದ ಬಳಿಕ ಶೂದ್ರರ ಬೆರಸಲಾಗದು.
ಇವರ ಜೀವದತೀತರ ಜಾತಿಯ ಉದ್ಭವಮಂ
ಇವದಿರ ಕಾಯಕ ಕುಲದರುಶನ ಪಕ್ಷ
ಸಪ್ತಧಾತು ಸರಿಯೆಂದೆಂಬರೆ
``ಕೃತಂ ಜೀವಂ ಕೃತಂ ಫಲಂ'
ಅಗ್ರಜ ಮೊದಲು ಅಂತ್ಯಜ ಕಡೆ
``ಬ್ರಾಹ್ಮಣ ಕ್ಷತ್ರಿಯ ವೈಶ್ಯ
ಶೂದ್ರೋವಾ ಗುರುಹಸ್ತಯೋ||
ಪ್ರತಿ ಭೂಜನ ಕರ್ತವ್ಯಂ
ಕರ್ತವ್ಯಂ ಪುನರ್ವತಾಯೋ'
ನಿವೃತ್ತಿ ಸಂಗಯ್ಯದೇವ ಬಲ್ಲ.
ಜಾತಿ ವಿಚಾರದ ಭೇದವ ಬಿಟ್ಟರೆ ಬಿಡುವುದು
ಬಿಡದಿರ್ದಡೆ ತಮ್ಮ ಮುನ್ನಿನಂತಿಹುದು.
|| 2 ||