ಕಾಷ*ಪದಾರ್ಥವನರಿದು, ಕರ್ಮಪದಾರ್ಥವ ಶೋಧಿಸಿಕೊಂಡು,
ವರ್ಮಪದಾರ್ಥವ ನಿರ್ಧರಿಸಿ,
ಇಂತೀ ಪದಾರ್ಥಂಗಳ ಅರ್ಪಿಸುವಲ್ಲಿ
ಬಂದ ಬಟ್ಟೆ, ಮುಂದಣ ಪಯಣ.
ನಿಂದ ಮಧ್ಯದಲ್ಲಿ ಕಾಬ ಸುಖಂಗಳ ಸಂದನಳಿದುದು, ಭರಿತಾರ್ಪಣ
ಸಂದಿಗೊಂದಿಯ ಸಂಸಾರಿಗಳಲ್ಲಿ ಬೆಂಬಳಿಯಾಗಿಹುದೆ ?
ಅವರ ಮಂದಿರಂಗಳಲ್ಲಿ ಸ್ತುತಿನಿಂದ್ಯಾದಿಗಳ ತಂದುಕೊಳ್ಳದೆ,
ಅವರಿಗೆ ಬಂಧ ಮೋಕ್ಷ ಕರ್ಮಂಗಳ ಭಾವಕ್ಕೆ ಸಂದನಿಕ್ಕದೆ,
ತಾ ಬಂದನಲ್ಲದಿಪ್ಪುದೆ ಭರಿತಾರ್ಪಣ.
ಇಂತೀ ನಿಹಿತ ತಿಳಿದು, ಸಂಸಾರ ಘಾತಕವ ಬಿಟ್ಟು,
ಪರದೇಶಿಕತ್ವವಾದುದು ಭರಿತಾರ್ಪಣ.
ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.