ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯಬಿಂದು ರೂಪಾಯಿತ್ತು. ಅಂತರಬಿಂದು ನಿರೂಪಾಯಿತ್ತು. ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು. ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು. ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಊಧ್ರ್ವಬಿಂದು ನಾದ ಮುಟ್ಟಲಿಕೆ ಜಂಗಮ, ಮಧ್ಯಬಿಂದು ಊಧ್ರ್ವ ಮುಟ್ಟಲಿಕೆ ಸ್ಥಾವರ, ಸ್ಥಾವರಬಿಂದು ಸ್ಥಾವರವಾದ ಊಧ್ರ್ವ ಮುಟ್ಟಲಿಕೆ ಭಕ್ತ, (ಭಕ್ತಿ?) ಬಿಂದು ನಾದ ಮುಟ್ಟಲಿಕೆ ಭವಿ. ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ, ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ ಭಕ್ತಂಗೆ ಕೊಡಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ.
--------------
ಚನ್ನಬಸವಣ್ಣ
ಬಣ್ಣದಚರ್ಮದ ಹೆಣ್ಣಿನಂಗಸಂಗದಕೂಟಸುಖ ಸವಿಯೆಂದು ಮನವೆಳಸುವ ಕಣ್ಣುಗೆಟ್ಟಣ್ಣಗಳು ನೀವು ಕೇಳಿರೋ ! ಶುನಿ ಎಲುವ ಕಡಿವಲ್ಲಿ ತನ್ನ ಬಾಯ ಲೋಳೆ ತನಗೆ ಸವಿದಟ್ಟುತಿಪ್ಪುದಲ್ಲದೆ, ಆ ಎಲುವಿನೊಳಗೇನು ಸಾರಸವಿಯುಂಟೆ ? ತನ್ನ ಊಧ್ರ್ವಬಿಂದು ಮಾಯಾವಶದಿಂದೆ ಅಧೋಗತಿಗಿಳಿದು ಮೂತ್ರನಾಳ ತಗುಲಿ ಕಿಂಚಿತ್‍ಸುಖ ಉಂಟಾಗುತಿಪ್ಪುದಲ್ಲದೆ ಆ ಹೆಣ್ಣಿನಿಂದೇನು ಸುಖವುಂಟೆ ? ಎಡ್ಡ ಪ್ರಾಣಿಗಳಿರಾ ! ಇಂತೀ ದೃಷ್ಟವ ತಿಳಿದು ಭೇದಿಸಿ ಕಾಣಲರಿಯದೆ ಹೇಸಿಕೆಯ ಕಿಸುಕುಳದ ಕೀವುತುಂಬಿ ಒಸರುವ ಹಸಿಯತೊಗಲಿನ ಹಳೆಯಗಾಯದಲ್ಲಿ ವಿಷಯಾತುರದಿಂದೆ ಬಿದ್ದು ಮತಿಮಸುಳಿಸಿ ಮುಂದುಗಾಣದೆ ಮುಳುಗಾಡುತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->