ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಿವಿರಹಿತ ಭಕ್ತನೆಂದೆಂಬರು, ಭವಿವಿರಹಿತ ಭಕ್ತನಾದ ಪರಿಯೆಂತೋ? ಭವಿಪಾಕಂ ನಿವೇದ್ಯಂ ಸ್ಯಾತ್ ಬಂಧನಂ ಭವಿಸಂಗಿನಾಂ ಸರ್ವಲೋಕಸ್ತು ಉಚ್ಛಿಷ್ಟಂ ಸಂಸಾರೋ ಹಿ ತಟಾಕವತ್ ಇದನರಿದು ಊರೆಲ್ಲಾ ಒಂದೇ ತಳಿಗೆಯಲುಂಡು ಬೇರೆ ಬೇರೆ ಕೈತೊಳೆದಂತೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕೀಲಿಲ್ಲದ ಬಂಡಿಯ ಗಾಲಿಯನುಚ್ಚಿ, ಈಸಿಲ್ಲದ ನೊಗಕ್ಕೆ ಕಾಲಿಲ್ಲದ ಕೋಣನ ಹೂಡಿ, ಹಾರಿ ಇಲ್ಲದೆ ಕಲ್ಲನೆಬ್ಬಿಸಿ, ಕೈಯಿಲ್ಲದೆ ಕಲ್ಲಪಿಡಿದು, ಬಂಡಿಯ ಮೇಲೆ ಹೇರಿ ಊರೆಲ್ಲಾ ಮಾರಿ ಹಾಗದ ರೊಕ್ಕವ ಕೊಂಡು ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರೆಲ್ಲಾ ಏರಿದ ಹರಗುಲವ, ನೀರಿನಲ್ಲಿ ದಾರಿಯ ಕೊಂಡು ಹೋಹವನ ಆರೈಕೆಯಲ್ಲದೆ ಏರಿದವರೆಲ್ಲಕ್ಕೂ ಆರೈಕೆವುಂಟೆ ? ಹೇಳುವಾತನ ವಿರಕ್ತಿ, ಕೇಳುವಾತನ ಸದ್ಭಕ್ತಿ ಉಭಯದ ನೆಲೆಯ ಆರಿಂದ ಅರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->