ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಭವಿವಿರಹಿತ ಭಕ್ತನೆಂದೆಂಬರು, ಭವಿವಿರಹಿತ ಭಕ್ತನಾದ ಪರಿಯೆಂತೋ?ಭವಿಪಾಕಂ ನಿವೇದ್ಯಂ ಸ್ಯಾತ್ ಬಂಧನಂ ಭವಿಸಂಗಿನಾಂಸರ್ವಲೋಕಸ್ತು ಉಚ್ಛಿಷ್ಟಂ ಸಂಸಾರೋ ಹಿ ತಟಾಕವತ್ಇದನರಿದು ಊರೆಲ್ಲಾ ಒಂದೇ ತಳಿಗೆಯಲುಂಡುಬೇರೆ ಬೇರೆ ಕೈತೊಳೆದಂತೆ ಕೂಡಲಚೆನ್ನಸಂಗಮದೇವಾ.
ಕೀಲಿಲ್ಲದ ಬಂಡಿಯ ಗಾಲಿಯನುಚ್ಚಿ,ಈಸಿಲ್ಲದ ನೊಗಕ್ಕೆ ಕಾಲಿಲ್ಲದ ಕೋಣನ ಹೂಡಿ,ಹಾರಿ ಇಲ್ಲದೆ ಕಲ್ಲನೆಬ್ಬಿಸಿ, ಕೈಯಿಲ್ಲದೆ ಕಲ್ಲಪಿಡಿದು,ಬಂಡಿಯ ಮೇಲೆ ಹೇರಿ ಊರೆಲ್ಲಾ ಮಾರಿಹಾಗದ ರೊಕ್ಕವ ಕೊಂಡು ಕಾಯಕವ ಮಾಡುತಿರ್ದನಯ್ಯಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.
ಊರೆಲ್ಲಾ ಏರಿದ ಹರಗುಲವ,ನೀರಿನಲ್ಲಿ ದಾರಿಯ ಕೊಂಡು ಹೋಹವನ ಆರೈಕೆಯಲ್ಲದೆಏರಿದವರೆಲ್ಲಕ್ಕೂ ಆರೈಕೆವುಂಟೆ ?ಹೇಳುವಾತನ ವಿರಕ್ತಿ, ಕೇಳುವಾತನ ಸದ್ಭಕ್ತಿ ಉಭಯದ ನೆಲೆಯ ಆರಿಂದಅರಿಯಬೇಕೆಂದನಂಬಿಗ ಚೌಡಯ್ಯ.