ಸ್ವಕಾಯದಂತರ್ಗತದಲ್ಲಿ, ಚಿದಾಕಾಶದಲ್ಲಿ
ನಿರ್ಮಲತೆಯಿಂ ಪರಮಹಂಸನು
ಶ್ರದ್ಧೆ ನಿಷೆ* ಸಾವಧಾನದಿಂದದ್ರಿಜೆಯ ಪತಿಯಪ್ಪ
ಪರಶಿವಲಿಂಗಮಂ ವೇಧಿಸಿ,
ತಿಥಿ ವಾರ ನಕ್ಷತ್ರ ಯೋಗ ಕರಣಂಗಳೆಂಬ ಶಂಕೆಗೆಟ್ಟು
ಹೃತ್ಕಮಲಮಧ್ಯದಲ್ಲಿಮಹಾಪ್ರಕಾಶ ಉದಯಿಸಲು
ಇದಕ್ಕೆ ಶ್ರುತಿ:
ಹಂಸಃ ಶುಚಿಷದ್ವಸುರಂತರಿಕಅಸದ್ಧೋತಾ ವೇದಿಷದತಿಥಿರ್ದುರೋಣಸತ್
ನೃಷದ್ವರಸದೃತಸದ್ಯೋಮಸದಬ್ಜಾಗೋಜಾ ಋತಜಾ ಆದ್ರಿಜಾ ಋತಂ ಬೃಹತ್
ಇಂತೆಂದುದಾಗಿ,
ಸದಾಸದ್ವ್ಯೋಮವ್ಯಕ್ತದಿಂ
ಸೌರಾಷ್ಟ್ರ ಸೋಮೇಶ್ವರಲಿಂಗವೇ ತಾನಾಗಿಪ್ಪರಯ್ಯ
ಪರಮಸ್ವಭಾವಿಗಳು.