ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪಂಚವರ್ಣದ ಗಾಣಕ್ಕೆ ಎಂಟೇಣಿನ ಕಣಿಯನಿಕ್ಕಿ,ಮೂರೆತ್ತ ಹೂಡಿ, ಎಳ್ಳು ಅಗಸಿ ಔಡಲ ಎಣ್ಣೆಯ ತೆಗೆದು ಉಂಡವರುಕೈಯೊಳಗಿನ ಕಂಡವ ತಿನ್ನದೆ ಕಾಣದವರ ಮುಂದೆ ಕಾರಿಕೊಂಡುಕಾಣದೆ ಎಡೆಯಾಡುತ್ತಿರ್ಪರು ನೋಡೆಂದನಯ್ಯಾಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.