ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ.
ಬಾಳೆಯೆಲೆಯಮೇಲೆ ತುಪ್ಪವತೊಡದಂತೆ,
ನಿಮ್ಮ ಔದುಂಬಫಳ ಛಾಯ ನುಡಿಯ ತೆಗೆದಿಡಿರಿ.
ಜಂಗಮಲಿಂಗ ಗುರುಹಿರಿಯರನರಸುವರೆ ಜ್ಞಾನಿಗಳು?
ಅವರ ಕಾಯ್ದಿಪ್ಪ ತನು ಮನ ಭಾವ ವಿಕೃತಿಯನರಸುವರಲ್ಲದೆ.
ಅದೇನು ಕಾರಣವೆಂದೊಡೆ:
ತನು ಮನ ಭಾವವಿಡಿದಿರ್ಪ ಜನರನ್ನು
ಒಂದು ವೇಳೆ ತಿಳಿಸಿಕೊಳ್ಳಬಹುದು;
ಅಳಿದುಳಿದಂಗಲಿಂಗಸಂಬಂಧಿಗಳೆಂದು ನುಡಿದು
ಅಳಿದಲ್ಲಿ ಉಳಿದರೆ ಅದು ಮಲದೇಹಿ, ಮರಳಿ ಶುದ್ಧವಾಗದು ನೋಡಾ.
ಹೇಮ ಮೌಕ್ತಿಕದಂತೆ ಅರಿದಾಚರಿಸುವುದು
ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯಾಗಬೇಕಾದರೆ.