ಭವರೋಗ ಮೊದಲಾದ ಎಲ್ಲಾ ರೋಗಂಗಳಿಗೆಯೂ
ಶಿವಲಿಂಗ ಪ್ರಸಾದವಲ್ಲದೆ ಮತ್ತೇನೂ ಇಲ್ಲವೆಂದುದು ವೇದ.
ದ್ವಿಪಾದಿಗಳು ಚತುಃಪಾದಿಗಳು ಮೊದಲಾದ ಸಕಲಪ್ರಾಣಿಗಳೆಲ್ಲವಕ್ಕೆ
ಇದೇ ಔಷಧಿಯೆಂದುದು ಯಜುರ್ವೇದ.
ಗಾಮೇಸ್ವಾಯ ಪುರುಹಾಯ ಭೇಷಜಂ ಅಧೋಲಿಸ್ಮಭ್ಯಂ |
ಭೇಷಜಂ ಸುಖೇಷಜಂ ಯದಿ ಸತಿ ಸುಗಮ್ಯೇಷ್ಯಾಂ |
ಅವಾಂಬ ರುದ್ರಮದಿ ಮಹೀಯದ ದೇವಂ ತ್ರ್ಯಂಬಕ ||
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಾ.