ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಛಲವನೆತ್ತಿಕೊಂಡ ಬಳಿಕ ಬಲುಹು ಸಲಿಸಲೇಬೇಕು.ತನ್ನ ಮನವ ತಾನರಿದು ಗೆಲಲೇಬೇಕು.ದೇವರೊಲವುಳ್ಳವರ ಕಂಡು ತಾನಾದೆನೆಂದೆಡೆ,ಛಲ ಸಲ್ಲದು ಕಂಡಯ್ಯಾ.ನೇಮವೆಂದಡೆ ಕಡೆ ಮುಟ್ಟಿಸಲೀಯೆ, ತಪ್ಪವಿಡಿವೆ ನೀನು.ಇದು ಕಾರಣ,ನಾನೇನು ಪೆರತೊಂದನರಿಯದಂತಿರಿಸೆನ್ನ, ಸಕಳೇಶ್ವರದೇವಾ.