ಶಿವನೆ ಗುರುವೆಂದು ಗುರುವಿಂಗೆ ತನುವನರ್ಪಿಸಿ,
ಶಿವನೆ ಲಿಂಗವೆಂದು ಲಿಂಗಕ್ಕೆ ಮನವನರ್ಪಿಸಿ,
ಶಿವನೆ ಜಂಗಮವೆಂದು ಜಂಗಮಕ್ಕೆ ಧನವನರ್ಪಿಸಿ,
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು
ನಿಜಮುಕ್ತಿಯನೈದಲರಿಯದೆ,
ನನ್ನ ಶೀಲ ಹೆಚ್ಚು ತನ್ನ ಶೀಲ ಹೆಚ್ಚೆಂದು
ಕುಲಸೂತಕ ಛಲಸೂತಕದಿಂದೆ
ಒಬ್ಬರನೊಬ್ಬರು ಹಳಿದಾಡುವ
ದುಃಶೀಲವಂತರ ಮೆಚ್ಚುವನೆ ನಮ್ಮ ಅಖಂಡೇಶ್ವರ.