ಮಾತಾಪಿತಸಂಯೋಗಸಂಭೂತನಲ್ಲದವನು
ಶ್ವೇತ ಪೀತ ಹರಿತ ಕಪೋತ ಮಾಂಜಿಷ* ಗೌರ
ಇಂತು ಷಡುವರ್ಣರಹಿತನಯ್ಯಾ.
ಆದಿ ಮಧ್ಯ ಅವಸಾನವೆಂಬುದಿಲ್ಲದವನ
ವೇದವೆಂತುಂಟೆಂದು ನಿರೂಪಿಸಲುಬಾರದು ಅಯ್ಯಾ.
ಇವರೆಲ್ಲರೊಳಹೊರಗೆ ತಾನಿಲ್ಲದಿಲ್ಲದವನ
ನಾ ಬಲ್ಲೆನೆಂಬ ಹಿರಿಯರ ಟಿಪ್ಪಣ ಮಿಕ್ಕುವು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಭಕ್ತಿಗಮ್ಯನು.