ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಡಿನಮರದಮೇಲೆ ತೆಂಗಿನಮರವ ಕಂಡೆ. ಟೆಂಗಿನಮರದಮೇಲೆ ಮಾವಿನಮರವ ಕಂಡೆ. ಮಾವಿನಮರದಲ್ಲಿ ಮೇಲುದೇಶದ ಪಕ್ಷಿ ಗೂಡನಿಕ್ಕಿದುದ ಕಂಡೆ. ಶ್ವೇತವರ್ಣ ಅಗ್ನಿಮುಖ ಕಿಡಿಗಣ್ಣು ಅಂಡಜಾತಪಕ್ಷಿ ಇರುವುದ ಕಂಡೆ. ತತ್ತಿಯಲ್ಲಿ ಎರಡು ಪಕ್ಷಿ ಪುಟ್ಟಿದುದ ಕಂಡೆ. ನಡುವಲ್ಲಿ ಹಲವು ಮರಿಗಳುದಯವಾದುದ ಕಂಡೆ. ಕಾಗಿಯ ಮರಿಗಳು ನುಂಗಿ ಪಕ್ಷಿಯ ಕೊಂದು ಉಭಯ ಮರ ಮೆಟ್ಟಿ ಹಾರಿ ಮಾವಿನಮರದ ಗೂಡಿನಲ್ಲಿ ಅಡಗಲು ಆ ಮರ ಬಯಲಾಯಿತ್ತು. ಅದಡಗಿದಲ್ಲಿ ಅದಡಗಿದಾತನೇ ಮಾಯಾಕೋಳಾಹಳ ಶರಣನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->