ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಹರಿಯಜ ಮುನಿಗಳೆಲ್ಲರು, ನಿಚ್ಚ ನಿಮ್ಮ ಬಾಗಿಲ ಕಾಯ್ದಿಹರು,ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿಡಿಂಗರಿಗನ ಮನೆಗೆ ಅಂಗಜಾಹವಕ್ಕೆ ಹೋಗಿ ಇದ್ದವರೊಳರೆಕೂಡಲಸಂಗಮದೇವಾ
ಗುರು ಕರುಣಾಕರ ಪರಶಿವ ಪರಮಗುರು ಭವಹರ ಚಿನ್ಮಯ ಚಿದ್ರೂಪಗುರುವೆ ನಿರಂಜನ ನಿರ್ಮಳ ನಿಃಖಳಗುರುವೆ ಸುರತುರವೆ.ಪದ :ವಹ್ನಿ ವಿಪಿನ ತರು ಕಾಷ*ವ ಸುಡುವಂತೆನ್ನ ಭವದ ಗೊಂಡಾರಣ್ಯವನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆಅನ್ಯಥಾ ಭಾಗ್ಯವ ಪಡೆದೆನು ಪರುಷದಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. | 1 |ಅಂಗಾತ್ಮನ ಪ್ರಾಣನ ಭವಿತನಗಳಹಿಂಗಿಸಿ ಅವಿರಳ ಪರಬ್ರಹ್ಮದ ಮಹಾಲಿಂಗವ ಕರ ಉರ ಶಿರ ಮನ ಭಾವದಲ್ಲಿಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷಯಂಗಳನೆಲ್ಲವ ತೊರಸಿ ಗಣಂಗಳಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. | 2|ದುರ್ಲಿಖಿತಂಗಳ ತೊಡೆದು ವಿಭೂತಿಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯಸರಮಾಲೆಯ ತೊಡಕಲಿಸಿ ಷಡಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದಲಿರು ನೀ ಕಂದಾ' ಯೆಂದು ಅಭಯಕರಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. | 3 |ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್ರಂಭೆ ಸ್ತನವನೂಡಿಯೆ ಸಲಹುವ ತೆರಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆಶಂಭು ಚರಣತೀರ್ಥಪ್ರಸಾದವನುಂಬಕಲಿಸಿಯೆ ಅನ್ಯಹಾರದಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. | 4 |ಮಾಡಕಲಿಸಿದ ಲಿಂಗದ ಸೇವೆಯ ಸದಾನೀಡಕಲಿಸಿದ ಜಂಗಮಕಮೃತಾನ್ನವಬೇಡಕಲಿಸಿ ಮುಕ್ತಿಯ ಫಲಪದವಗೂಡಕಲಿಸಿ ಶಿವಾನಂದದಾ ಲೀಲೆಯೊಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ | 5 |