ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ, ಅಷ್ಟಪ್ರಕೃತಿ ಗುಣವ ನಷ್ಟವ ಮಾಡಿ, ಕುಂಡಲಿಯನಂಡಲೆದು, ಬಲಿದೆತ್ತಿ ಮದ್ಯಮಾರ್ಗದಲ್ಲಿ ನಡೆಸಿ, ಊಧ್ರ್ವಸ್ಥಾನದಲ್ಲಿ ನಿಲಿಸಿದಡೆ, ಒಂದು ಮಾತು ಕೇಳಬಹುದು. ಆ ಮಾತಿನ ಬೆಂಬಳಿಯಲ್ಲಿ; ಜ್ಯೋತಿರ್ಲಿಂಗವ ಕಂಡು ಕೂಡಿದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.