ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರಾರು ಕಂಡಿಕಿ ದಂಡಿಗಿಗೆ ಮೂರಾರು ಬಟ್ಟಗಾಯ ಕಟ್ಟಿ, ಈರೆಂಟು ಮೆಟ್ಟಿ, ಆರೊಂದು ತಂತಿಯ ಹೂಡಿ, ಕರವ ಕಟ್ಟಿ, ಬಿರಡಿಯ ತಿರುಹಿ, ಮೂರು ಬೆರಳಿನಲ್ಲಿ ಕಿನ್ನರಿಯ ಹೊಡೆದು ಬೀದಿಬಾಜಾರದಲ್ಲಿ ತಿರುಗುತ್ತಿರುವಲ್ಲಿ, ತಿರುಗುವದ ಜೋಗಿ ಕಂಡು ಕಕ್ಕನ ಕಿನ್ನರಿಯಕಾಯನೊಡೆದು ದಂಡಗಿಯ ಮುರಿದುಹಾಕಿತ್ತು. ತಂತಿಯ ಹರಿದು, ಬಿರಡಿಯನುಚ್ಚಿ, ಕುದುರಿಯ ಸುಟ್ಟು, ಬೆರಳ ಮುರಿದು ಡೋಹಾರನ ಕೊಂದು, ಡೋಹಾರ ಕಕ್ಕಯ್ಯನ ಮನೆಯಲ್ಲಿ ಜೋಗಿ ಅಡಗಲು, ಅಡಗಿದ ಜೋಗಿಯು ಸತ್ತು, ಡೋಹಾರ ಕಂಡು ಎದ್ದು ಕಾಯಕವ ಮಾಡುತಿರ್ದರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸು ಪ್ರಧಾನಿಗಳು ಬಿಟ್ಟಿಯ ಮಾಡಲಿಲ್ಲ. ಬ್ಯಾಗಾರಿ ಗಂಟ ಹೊರಲಿಲ್ಲ. ಹೊಲೆ ಮಾದಿಗ ಡೋಹಾರ ಗಂಟು ಹೊತ್ತು ಕೂಳುಕಾಣದೆ ಬಿಟ್ಟಿಯಮಾಡಿ. ಹಾಗದ ಕಾಯಕವನುಂಡು ಕಾಯಕವ ಮಾಡುತಿರ್ದರಯ್ಯ ನಿಮ್ಮವರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರುಗಂಟಿನ ದಂಡಿಗಿ, ಆರು ಕಾಯಿ, ಒಂಬತ್ತು ಮೆಟ್ಟು, ಬಿಳಿಯ ಕುದುರೆ, ಒಂದೆ ತಂತಿ, ನಾಲ್ಕು ಬಿರಡಿ, ಮೂರುಬೆರಳಿನಲ್ಲಿ ಡೋಹಾರನ ಕಿನ್ನರಿಯ ಹೊಡೆಯಲು, ಬ್ರಹ್ಮ ಮತ್ರ್ಯದಲ್ಲಿ ಸತ್ತು, ವಿಷ್ಣು ಸ್ವರ್ಗದಲ್ಲಿ ಸತ್ತು, ರುದ್ರ ಪಾತಾಳದಲ್ಲಿ ಸತ್ತು, ಸಕಲ ಪ್ರಾಣಿಗಳು ಬ್ರಹ್ಮಾಂಡದಲ್ಲಿ ಅಳಿದರು. ಇಂತೀ ವಿಚಿತ್ರವ ನೋಡಿ ಕಿನ್ನರಿಸಹಿತ ಡೋಹಾರ ಅಂಗೈಯಲ್ಲಿ ಬಯಲಾದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->