ಅನಾದಿ ಪರಶಿವಲಿಂಗವನು
ತಮ್ಮ ವಶಗತವ ಮಾಡಿಕೊಂಡಾಚರಿಸುವ ಅಪ್ರತಿಮ ಶರಣರಿಗೆ
ಬಿನುಗು ಮಾತಿನಲ್ಲಿ ಜಿನುಗುತಲೊಂದೊಂದು
ಘನವ ಕಿರಿದಿಟ್ಟು, ಕಿರಿದ ಘನವಮಾಡಿ,
ಹುಸಿಹುಂಡನ ಮಾಟವನು ಢಂಬಿಗಿಕ್ಕುವ
ಭಂಡ ಮೂಕೊರೆಯರು ದಂಡಧರನಾಳಿನ ಕೈಯಲ್ಲಿ ಕೊಲ್ಲಿಸಿಕೊಳ್ಳರೆ?
ಮುಂದೆ ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ ಕೆಟ್ಟರು.