ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೀಲವಂತರೆಲ್ಲ ಶೂಲದ ಹೆಣನೆಂಬೆ. ಕ್ರಿಯಸ್ಥರೆಲ್ಲ ಬೇಡಿಬಂದಿಕಾರರೆಂಬೆ. ವ್ರತಸ್ಥರೆಲ್ಲ ಢಾಲಿಬಂದಿಕಾರರೆಂಬೆ. ನೇಮಸ್ಥರೆಲ್ಲ ಆಳುಗಳೆಂಬೆ. ಲಿಂಗ ಇದ್ದವರಿಗೆ ಹೊಲೆಯರೆಂಬೆ. ಲಿಂಗವಿಲ್ಲದವರಿಗೆ ಉತ್ತಮರೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->