ಅಥವಾ

ಒಟ್ಟು 65 ಕಡೆಗಳಲ್ಲಿ , 1 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮನ ಮಂದಿರದಡವಿಯೊಳಗೆ ಶುಕ್ಲಶೋಣಿತವೆಂಬ ಮಡಕೆಯ ಮಾಡಿ ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕದ್ರವ್ಯಂಗಳ ಮಡಕೆಯಲ್ಲಿ ನಿಶ್ಚಯಿಸಿ ಆ ಮಡಕೆಯನೊಡೆದಾ[ಗಲೆ ಭಕ್ತ] ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.
--------------
ಬಹುರೂಪಿ ಚೌಡಯ್ಯ
ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು. ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ? ಎನ್ನ ಬಹುರೂಪ ಬಲ್ಲವರಾರೋ ? ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ ರುದ್ರನ ಜಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ ಇವನೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದ ಮಡಿವಳ ಮಾಚಯ್ಯನ ನೆನೆದಾಡುತ್ತಿರ್ದೆ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಗಾರುಡಿಗನ ವಿಷವಡರಬಲ್ಲುದೆ ? ಸೂರ್ಯನ ಮಂಜು ಮುಸುಕಬಲ್ಲುದೆ ? ಗಾಳಿಯ ಮೊಟ್ಟೆಯ ಕಟ್ಟಬಹುದೆ ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ ರೇಕಣ್ಣಪ್ರಿಯ ನಾಗಿನಾಧಾ ?
--------------
ಬಹುರೂಪಿ ಚೌಡಯ್ಯ
ಭಕ್ತರ ಬರವಿಂಗೆ ಮಂಚವನಿಳಿಯದ ಕಾರಣ ಧಮ್ಮು ದ್ಥಿಮ್ಮನೆ ಬೆನ್ನಬಡಿದು ಅವರಟ್ಟುಗೆಲಸಕ್ಕೆ ಹೋಗೆನಾಗಿ ಎನ್ನ ತೊಡೆಯ ಕೊಯ್ದುಕೊಂ[ಬೆ]. ರೇಕಣ್ಣಪ್ರಿಯ ನಾಗಿನಾಥನ ಮಹಾಮನೆಯಲ್ಲಿ ಕಾಯದಂಡ ಕಲಕೇತ [ನಾನು].
--------------
ಬಹುರೂಪಿ ಚೌಡಯ್ಯ
ವೇದ್ಥಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು. ಸಾದ್ಥಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು. ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ. ಅರ್ಧನಾರೀಶ್ವರನ ರೂಪು ಇಂತೆಂದು ಶುದ್ಧವಾಯಿತ್ತೀ ಲೋಕದೊಳಗೆ. ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ. ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ. ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು. ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು ಅರ್ಪಿತವ ಮಾಡಿ ; ನಡೆಸಿ ತೋರಿದ ಭಕ್ತರ ತನುವಿನೊಳಗೆ ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ : ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ ಮಹಾಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಸಮರ್ಪಿಸಿ ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ. ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ-ಸಾಕ್ಷಿ: ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ | ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ || ಇಂತಲ್ಲದೆ ಅಪವಿತ್ರದ್ರವ್ಯವ, ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ ಚಾಂಡಾಲನ ಮುಖವ ನೋಡಲಾಗದು, ರೇಕಣ್ಣಪ್ರಿಯ ನಾಗಿನಾಥಾ
--------------
ಬಹುರೂಪಿ ಚೌಡಯ್ಯ
ಬಸವಣ್ಣನಿಂದ ಶುದ್ಧಪ್ರಸಾದಿಯಾದೆ. ಚನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆ. ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆ. ಇವರೆಲ್ಲರ ಪ್ರಸಾದಿಯಾಗಿ ರೇಕಣ್ಣಪ್ರಿಯ ನಾಗಿನಾಥನಲ್ಲಿ ಸೊಬಗ ಮೆರೆದೆ
--------------
ಬಹುರೂಪಿ ಚೌಡಯ್ಯ
ಆಡುವಡೆ ಸದಾಚಾರಿಗಳ ಕೂಡೆ ಆಡುವದು. ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು. ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವದು. ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ ರೇಕಣ್ಣಪ್ರಿಯ ನಾಗಿನಾಥ್ಞಿ.
--------------
ಬಹುರೂಪಿ ಚೌಡಯ್ಯ
ಒಂಬತ್ತು ಇಟ್ಟಿಯ ನಡುವೆ ಒಂದು ಕತ್ತಿಯ ನಟ್ಟು ತುಟ್ಟತುದಿಯ ಮೆಟ್ಟಿ ಆಡಲಾಗಿ, ಆ ಕತ್ತಿ ಇಟ್ಟಿಯ ತಾಗಿ, ಆ ಇಟ್ಟಿ ನಿಷ್ಠೆವಂತರ ತಾಗಿ ಸತ್ತರೆಲ್ಲರು ಆಟಕ್ಕೆ ಮೊದಲೆ ರೇಕಣ್ಣಪ್ರಿಯ ನಾಗಿನಾಥನಲ್ಲಿ.
--------------
ಬಹುರೂಪಿ ಚೌಡಯ್ಯ
ಪ್ರಣವಮಂತ್ರರೂಪ ಪರಶಿವನ ಚೈತನ್ಯ ಎಲ್ಲಾ ಮಂತ್ರಂಗಳಿಗೆ ಚೈತನ್ಯವು. ಎಲ್ಲಾ ತಂತ್ರಂಗಳಿಗೆ ಚೈತನ್ಯವು. ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ || ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು. ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮಥ್ರ್ಯವು. ಅದು ಕಾರಣ, ಮಂತ್ರವೆ ಅವಯವವು ರೇಕಣ್ಣಪ್ರಿಯ ನಾಗಿನಾಥಂಗೆ.
--------------
ಬಹುರೂಪಿ ಚೌಡಯ್ಯ
ಮಿತಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ. ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ ರೇಕಣ್ಣಪ್ರಿಯ ನಾಗಿನಾಥಿನಲ್ಲಿ ಅಳಿಯದಂತೆ ಉಳಿಹಿಕೊಳ್ಳಿರಣ್ಣ, ಯೋಗ ಸಾಧ್ಯವಪ್ಪನ್ನಕ್ಕ.
--------------
ಬಹುರೂಪಿ ಚೌಡಯ್ಯ
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು ಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿ ಮತ್ತದನು ತಲೆಯಲ್ಲಿ ಹೊತ್ತು, ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದ ರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತುಹೋಗದ ಬಹುರೂಪವ.
--------------
ಬಹುರೂಪಿ ಚೌಡಯ್ಯ
ಶುದ್ಧವೆ ಜವನಿಕೆಯಾಗಿ, ಸಿದ್ಧವೆ ಸಿಂಹಾಸನವಾಗಿ ಪ್ರಸಿದ್ಧದ ಹೊದಿಕೆಯ ಹೊದ್ದು, ನಾನಾಡುತ್ತಿರ್ದೆ ಬಹುರೂಪ. ಶುದ್ಧ ಓಡಿದಲ್ಲಿ, ಇದ್ದ ನಿಜ ನಾಸ್ತಿಯಾಯಿತ್ತೆನ್ನ ಬಹುರೂಪು. ಸಿದ್ಧವೆಂಬ ಸಿಂಹಾಸನ ಅಳಿದಲ್ಲಿ ಬುದ್ಧಿಗೆಟ್ಟಾಡುತ್ತಿದ್ದುದಯ್ಯಾ, ಎನ್ನ ಬಹುರೂಪು. ಪ್ರಸಿದ್ಧ ಹೊದಿಕೆ ಹರಿದಲ್ಲಿ ನಾ ಬಸವನ ಕೂಡೆ ಆಡುತ್ತಿರ್ದೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಬಿತ್ತೆತ್ತ ಮುಂತಾಗಿ ಬಿತ್ತಿದಡೇನೋ ? ಬೀಜ ನಿರಾಳದ ಬೆಳಸು. ಶರಣಚಾರಿತ್ರವೆಂತಿರ್ದಡೇನೋ ? ರೇಕಣ್ಣಪ್ರಿಯ ನಾಗಿನಾಥನ ಶರಣರ ಅವರಿವರೆಂದಡೆ ನಾಯಕನರಕ.
--------------
ಬಹುರೂಪಿ ಚೌಡಯ್ಯ
ಇನ್ನಷ್ಟು ... -->