ಅಥವಾ

ಒಟ್ಟು 148 ಕಡೆಗಳಲ್ಲಿ , 6 ವಚನಕಾರರು , 144 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಿಯಿಡಲಿಲ್ಲ, ನುಡಿಯನೇನೆನಲಿಲ್ಲ,ಸರಸವೆನಲಿಲ್ಲ, ಆ ಸರಸ ವಿರೂಪಾದ ಬಳಿಕ ಪ್ರಸಾದವೆನಲಿಲ್ಲ. ಆ ಪ್ರಸಾದ ಪರಿಣಾಮದಲ್ಲಿಯಡಗಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು. ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು. ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು. ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ. ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಮೃತವಳಿದು ಕಾಯವುಳ್ಳವಳಾದೆ. ಅಮೃತವಿಲ್ಲದ ರಸವನುಂಡು ಅಮೃತಕಾಯಳಾದೆ. ವಿಭ್ರಮದ ಸೂಚನೆಯ ಹಂಗಿಲ್ಲದೆ ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ (ತೀ)ರಿತ್ತು. ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು. ಅವರ ಕಂಡು ನಾನು ಮರುಳುಗೊಂಡರೆ ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಆಟವಳಿದು ನಿರಾಕುಳವಾಯಿತ್ತು; ನಿರಾಕುಳ ಸಂಬಂಧದಿಂದ ನಿಜವನರಿದು ಬದುಕಿದೆನಯ್ಯ. ಮುಕ್ತಿಯನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ತಿಳುವಿನ ಸಂಗವಿನ್ನೇತಕಯ್ಯ ಎನಗೆ. ಆ ತಿಳುಹಿನ ಪ್ರಾಣ ನಿರಾಧಾರದಲ್ಲಿ ನಿಂದ ಬಳಿಕ, ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ, ಅಂಗದ ಸಂಗಿಗಳಲ್ಲಿ ಆಚಾರದ ಕುರುಹಿನವಳಲ್ಲ. ಅಕ್ಷಯದ ಸಮಾಧಾನದಲ್ಲಿ ನಿಂದ ಬಳಿಕ ಪರಿಣಾಮಿಯಾನಯ್ಯ ಸಂಗಯ್ಯ.
--------------
ನೀಲಮ್ಮ
ಹೆಸರಿಲ್ಲದ ರೂಪ ಕಂಡು ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು. ಕುರುಹಿಲ್ಲದ ಮೂರ್ತಿಯ ಕಂಡು ಅದ್ವೈತಾನಂದಿಯಾದೆ ನಾನು. ಪ್ರಣವ ಜ್ಯೋತಿಷ್ಟವರ್ಣವ ತಿಳಿದು ಪರಂಜ್ಯೋತಿಲಿಂಗವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಬಂಗಾರವನೊಲ್ಲೆ, ಶೃಂಗಾರವನೊಲ್ಲೆ, ಇಹದ ದಾರಿಯನೊಲ್ಲೆ, ಪರದ ನೆರವಿಯನೊಲ್ಲೆ, ಮತ್ತೇನುವೊಲ್ಲೆ ಕಂಗಳ ಮುಂದೆ ಸಂಗಯ್ಯ ಬಂದುದೆನಗೆ ಸಾಕು. ಮನಹೆಚ್ಚಿ ಮಾಡಿ ನೇಮಿಸಿದ ಘನರತಿಯನು, ಹೆಂಗಳೆಯರ ಸಹವಾಗೆನ್ನಕೂಡಿ ಪರಿಣಾಮಿಸಿದರೆ ಸಾಕು. ಗುರುನಿರಂಜನ ಚನ್ನಬಸವಲಿಂಗವೆನಗೆ ಮೆಚ್ಚಿದರೆ ಸಾಕು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಲೆಯಿಲ್ಲದೆ ಮರ ಕಾಯಾಯಿತ್ತು, ಆ ಮರ ಫಲವಾಯಿತ್ತು, ಆ ಫಲ ನಿಃಫಲವಾಯಿತ್ತು ಆ ನಿಃಫಲವನುಂಡೀಗ ನನಗೆ ಸುಖಸಂಯೋಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ನೋಡುವಡೆ ಎನ್ನ ಕಣ್ಣಿಂಗೆ ಗೋಚರವಲ್ಲ ಆ ಕಾಯ ಕಲ್ಯಾಣ. ಆ ಕಾಯ ಕಲ್ಯಾಣದೊಳಗೆ ಸರೋವರದಷ್ಟದಳಂಗಳ ಮಧ್ಯದಲ್ಲಿ ಹೆಟ್ಟಿಗೆಯಿರಲು ಆ ಹೆಟ್ಟಿಗೆಯ ಕುರುಹ ಕಂಡು ನಿಷ್ಠೆಯ ಇರವನರಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಇಬ್ಬರು ನಾವು ಒಂದೆಡೆಯನುಂಡೆವು. ಉಂಬ ಊಟದಲ್ಲಿ ತೃಪ್ತಿಯ ತಳದು ತನು ಸೋಜಿಗವಾಯಿತ್ತಯ್ಯ. ಮನ ಮಗ್ನವನೈದಿ ಮಹಾಲಿಂಗದತ್ತ ಶುದ್ಭಿ ನಿಃಶುದ್ಧಿಯಾಯಿತ್ತಯ್ಯ. ಅಡಗಿದೆನಡಗಿದೆನತ್ತತ್ತಲೆ ನಾನು. ಉಡುಗಿದೆನೀ ಕಾಯವ. ಉಭಯದ ಸಂಗವ ಹರಿದು ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಡದೆರಹಿಲ್ಲದ ಪ್ರತಿರೂಪ ಕಂಡೆ. ಎಡದೆರಹಿಲ್ಲದ ಪ್ರತಿರೂಪನೆ ಅರಿದು, ಪ್ರಸನ್ನ ಪ್ರಸನ್ನ ಪ್ರಸಾದವ ಕಂಡು ಪ್ರಸಾದಿಯಾನಾದೆನಯ್ಯ. ಪ್ರಸಾದ ಸಂಬಂಧದಲ್ಲಿ ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಅಘೋರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು, ಸದ್ಯೋನ್ಮುಕ್ತಿಯ ಪಡೆಯಲು, ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು. ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ.
--------------
ನೀಲಮ್ಮ
ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು, ಆ ಕುರುಹ ಮರೆದು, ಮನ ಮಹಾಲಿಂಗದಲ್ಲಿ ಒಚ್ಚತಗೊಟ್ಟು, ಉಭಯಪ್ರಸಾದವನುಂಡು, ಉಣಲಿಲ್ಲದೆ ಉಭಯಗೆಟ್ಟೆನಯ್ಯ ಸಂಗಯ್ಯ.
--------------
ನೀಲಮ್ಮ
ಪ್ರಾಣವಿಲ್ಲದ ಹೆಣ್ಣು ನಾನಾಗಿರಲು, ಆ ಪ್ರಾಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು. ಎಲ್ಲವನಳಿದು ಎಲ್ಲವ ತಿಳಿದು ಎಲ್ಲಾ ವಸ್ತುವ ಕಂಡು ನಿರ್ಲೇಪಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಇನ್ನಷ್ಟು ... -->