ಮೂರಡಿ ಮಣ್ಣಿಗೆ ಆರು ಹೊನ್ನ ತೆತ್ತು,
ಮೀರಿ ಹದಿಕೆಯ ಬೇಡೆನೆಂದು, ಈ ಗ್ರಾಮದವರ ಮುಂದಿಟ್ಟು
ಮೀರಲಿಲ್ಲಾಯೆಂದು ಪಟ್ಟೆಯ ಕೊಟ್ಟು,
ಮತ್ತೂರು ಗೂಡಿ ಹದಿಕೆಯ ಬೇಡಿದಡೆ, ನಾ ಕೊಡಲಿಲ್ಲ.
ನೀ ಕೊಟ್ಟ ಪಟ್ಟೆ
ನಮ್ಮ ನಟ್ಟನಡುಮನೆಯ ಐದುಕಾಲ ನೆಲಹಿನಲ್ಲಿ ಕಟ್ಟಿಯದೆ ಕೋ !
ನೀ ತಪ್ಪಿದಡೆ ನಿನಗೆ ಹೇಳುವ ಒಡೆಯರುಂಟೆ?
ನಾನೊಕ್ಕಲು ನೀನೊಡೆಯ.
ಮೀರಿ ಕೊಂಡಿಹೆನೆಂದಡೆ
ಮುನ್ನವೇ ಸಿದ್ಧಾಯ ಸೆರೆಗೆ ನಾನೊಳಗು.
ಗುತ್ತಿಗೆಕಾರಂಗೆ ಮತ್ತೆ ಕುಳವುಂಟೆ?
ಇನ್ನು ಕೊಟ್ಟೆನಾದೊಡೆ
ಎನ್ನ ಹಟ್ಟಿಕೊಟ್ಟಿಗೆಯೊಡೆಯ ಕಾಮಭೀಮ ಜೀವಧನದಾಣೆ.