ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆವಾವಾಚರಣೆಯ ತೊಟ್ಟಲ್ಲಿ ಅನುಸರಿಯಿಲ್ಲದಿಪ್ಪುದೆ, ಗುರುಚರಲಿಂಗಪೂಜೆ.ಖಂಡಿತ ಕಾಯಕಕ್ಕೆ ಇಂದಿಂಗೆ ನಾಳಿಂಗೆಂಬ ಸಂದೇಹವಿಲ್ಲದಲ್ಲಿಯೆ ಸರ್ವಶೀಲ.ತಾಗು ನಿರೋಧ ಬಂದಲ್ಲಿ ,ಕಂದದೆ ಕುಂದದೆ ಎಂದಿನಂತಿದ್ದಲ್ಲಿ ಶಿವಲಿಂಗಪೂಜೆ.ಇದಕ್ಕೆ ಹಿಂದುಮುಂದು ವಿಚಾರಿಸಲಿಲ್ಲ,ಇದಕ್ಕೆ ಐಘಂಟೇಶ್ವರಲಿಂಗ ಸಾಕ್ಷಿಯಾಗಿ.