ಅಟ್ಟಂಬಾರಣ್ಯದೊಳಗೊಂದು
ಕಟ್ಟಲಿಲ್ಲದ ದೇಗುಲವುಳಿದಿಪ್ಪುದು ನೋಡಿರಯ್ಯಾ !
ಆ ದೇಗುಲದೊಳಗೊಂದು
ಸರ್ವಜೀವನೆಂಬ ರತ್ನ ಬಿದ್ದಿಪ್ಪುದು ನೋಡಿರಯ್ಯಾ !
ಆ ರತ್ನ ಮೂರುಲೋಕಕ್ಕೆ ಮೈದೋರದಿಪ್ಪುದು ನೋಡಿರಯ್ಯಾ !
ನೆಟ್ಟಕಲ್ಲಿನೊಳಗೊಬ್ಬ ಹುಟ್ಟುಗುರುಡನುದ್ಭವಿಸಿ ಬಂದು,
ಆ ಸರ್ವಜೀವನೆಂಬ ರತ್ನವ ಮುಟ್ಟಿ ನೋಡಿದರೆ,
ಆ ಹುಟ್ಟಗುರುಡ ತಾನೆ ರತ್ನವಾದ
ಆದ ಕಂಡು ನಾ ಬೆರಗಾದೆನಯ್ಯಾ, ಜಂಗಮಲಿಂಗಪ್ರಭುವೆ.