ಮಾಟ ಕೂಟವೆಂಬ ತೆಪ್ಪವ ಮಾಡಿ,
ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು,
ಒತ್ತುತ್ತಿರಲಾಗಿ
ಹಾಯಿ ಮಾರುತನೆಂಬ ಮತ್ಸ ್ಯ.
ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ
ತ್ರಿವಿಧದ ಸತ್ತೆಯ, ಸರ್ವೇಂದ್ರಿಯ ಬೆಳೆದ ಪಾಸೆಯ
ಮರೆಯಲ್ಲಿ ತಪ್ಪಿಹೋಯಿತ್ತು ಮತ್ಸ ್ಯ.
ಇಂತೀ ಬರಿ ಕುಕ್ಕೆಯ ಹೊತ್ತು
ಮತ್ಸ ್ಯವ ಕಾಣದೆ ವೆಚ್ಚ ಕಡಹಿಲ್ಲ.
ಇದರಚ್ಚಿಗವ ಬಿಡಿಸಾ,
ಕದಕತನ ಬೇಡ ಕದಂಬಲಿಂಗಾ.