ಚಲನೆಯ ಅಪ್ಪುವಿನ ಮೇಲೆ
ಷಡುವರ್ಣದ ಲೆಕ್ಕಣಿಕೆಯ ಕಡ್ಡಿಯಲ್ಲಿ
ಪುತ್ಥಳಿಯ ಬರೆಯಲಿಕ್ಕಾಗಿ
ಅವಯವಂಗಳ ಅಂಗಸ್ಥಾನದಲ್ಲಿ ಲಕ್ಷಿಸಿಹೆನೆನಬಹುದೆ?
ಸಂಸಾರಿಗೆ ಸಂಕಲ್ಪಿಗೆ ವಿಷಯಲಂಪಟಂಗೆ
ಜೂಜುಪೇಂಟೆ ಕದನಕರ್ಕಶಂಗೆ
ರಾಗದ್ವೇಷಿಗೆ, ತಧ್ಯಮಿಥ್ಯವ ಹೊತ್ತಾಡುವಂಗೆ, ದುರ್ಮತ್ತಂಗೆ
ಇಂತಿವರೊಳಗಾದ ಅರ್ತಿಕಾರತನದಲ್ಲಿ
ದುರ್ಮದಾಂಧಂಗೆ ಭಕ್ತಿ ಸ್ಥಲವಿಲ್ಲ.
ಕರ್ತೃಸ್ಥಲವಾದಡೂ ಗುರುತ್ವ ಅವನಿಗಿಲ್ಲ.
ವಿರಕ್ತನಾದಡೂ ನಿಜತತ್ವದ ನೆಲೆ ಅವನಿಗಿಲ್ಲ.
ಇಂತಿವನೆಲ್ಲವನುತ್ತರಿಸಿ ನಿಂದಾತಂಗಲ್ಲದೆ
ಕೂಗಿನ ಕುಲಕ್ಕೆ ಹೊರಗಲ್ಲ
ಮಹಾಮಹಿಮ ಮಾರೇಶ್ವರಾ.