ಸ್ಥೂಲಕ್ಕೆ ಮೂರು, ಸೂಕ್ಷ್ಮಕ್ಕೆ ಎರಡು, ಕಾರಣಕ್ಕೆ ಒಂದೆಂದು ತಿಳಿದ ಮತ್ತೆ ,
ನಾನಾ ಸಂದುಸಂದ ಹೊಲಿಯಲೇತಕ್ಕೆ ?
ನಾ ಗಳಿಗೆಯಲೊಡಗೂಡಿದಡದು ಮುಗಿದು ಮತ್ತೆ,
ಎರಡು ಹೊರೆಯಾಯಿತ್ತು.
ಎರಡು ಹೊರೆಯ ಹೊಲಿಗೆಯನರಿದ ಮತ್ತೆ, ಹೋದವ ತಾನೇಕವಾದ ಮತ್ತೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನು ಒಡಗೂಡುವನ ಇರವು.