ಈ ಪದದಿಂದ ಪ್ರಾರಂಭವಾಗುವ ವಚನಗಳು:
ಈ ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿಮೆಚ್ಚುವ ದೈವ ಬೇಡ.ಇಂತೀ ಕ್ರೀ ಓಸರಿಸಿದಲ್ಲಿ ಬಟ್ಟಡೆ ಪ್ರಾಣವಮೆಚ್ಚಿ ಕೈಲಾಸಕ್ಕೆ ಕರೆವ ದೈವವುಂಟೆ?ಇಂತೀ ಉಭಯ ಭ್ರಷ್ಟವಾದಲ್ಲಿ ಸಿಕ್ಕಿತ್ತು ವ್ರತ.ಮನಕ್ಕೆ ಮನೋಹರ ಶಂಕೇಶ್ವರ ಲಿಂಗ ತಪ್ಪಿದಡೂಹೊರಗೆಂಬೆನು.