ದೃಷ್ಟಿ ಕಾಮ್ಯಾರ್ಥದಲ್ಲಿ ನೆಟ್ಟು ನೋಡಿ,
ಒಡೆಯರು ಭಕ್ತರ ವಧುಗಳಲ್ಲಿ
ಮತ್ತಾ ದೃಷ್ಟಿಯ ಮುಟ್ಟಲೇತಕ್ಕೆ?
ಮತ್ತೆ ಇತ್ಯಾದಿಗಳ ಬಿಟ್ಟು ಹೆಣ್ಣವ್ರತ ಕಟ್ಟೆಂದು ಮಾಡಬಹುದೆ?
ಮತ್ತದ ಕಟ್ಟಿಕೊಂಡು ಮಿಟ್ಟಿಯ ಭಂಡರಂತೆ
ಕುಟ್ಟಿಯಾಡಬಹುದೆ?
ಇಂತೀ ಬಾಹ್ಯ ದೃಷ್ಟಿಗಳ್ಳರ, ಆತ್ಮಚಿತ್ತಗಳ್ಳರ
ವ್ರತಸ್ಥರೆಂದು ಎನಲಾಗದು.
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು
ಅವರುವ ಮುಟ್ಟದಿಹನಾಗಿ