ಅಪ್ಪು ಮಣ್ಣು ಕೂಡಿ ಘಟವಾದಂತೆ,
ಚಿತ್ತು ಶಕ್ತಿ ಕೂಡಿ ಎನಗೆ ಇಷ್ಟವಾಗಿ ಬಂದು ನಿಂದೆಯಲ್ಲಾ!
ಚಿತ್ತ ನಿಲುವುದಕ್ಕೆ ಗೊತ್ತಾಗಿ,
ಗೊತ್ತಿನ ಮರೆಯಲ್ಲಿ ನಾ ಹೊತ್ತ ಸಕಲೇಂದ್ರಿಯವನೀಸೂವುದಕ್ಕೆ ತೆಪ್ಪವಾಗಿ
ಭವಸಾಗರವ ದಾಂಟಿಸಿದೆಯಲ್ಲಾ!
ಭಕ್ತಿಪ್ರಿಯ ಸತ್ಯಕರಂಡಮೂರ್ತಿ
ಸದಾಶಿವಮೂರ್ತಿಲಿಂಗವೆ ಎನ್ನಂಗದಲ್ಲಿ ಹಿಂಗದಿರು.