ಇಷ್ಟಪ್ರಸಾದವ ದೃಷ್ಟಕ್ಕೆ ಅರ್ಪಿಸಿಕೊಂಡೆಹೆನೆಂಬನ್ನಕ್ಕ
ದೃಷ್ಟವೂ ಇಲ್ಲ, ಇಷ್ಟವೂ ಇಲ್ಲ.
ಉಭಯವಿಲ್ಲಾಗಿ ತೃಪ್ತಿಗೆ ಮುಟ್ಟದ ಅರ್ಪಿತವ
ಇದನಾರು ಬಲ್ಲರು.
ಮುಟ್ಟದಲ್ಲಿಯೆ ಸವಿಸಾರಂಗಳ ಭೇದವ ದೃಷ್ಟ ಮುಂತಾಗಿ
ಅರ್ಪಿತದಲ್ಲಿಯೆ ಸವಿಸಾರಂಗಳನರಿದು ಅರ್ಪಿಸಬಲ್ಲಡೆ
ಅರ್ಪಿತಸೂತಕ ಅಲ್ಲಿಯೆ ನಷ್ಟ.
ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ.
ದಹನ ಚಂಡಿಕೇಶ್ವರಲಿಂಗವು ತಾನಾದವನ ಸಂಗದ ಕೂಟ.