ತಾ ನಿಜವಿಟ್ಟ ಆ ನೆಲೆಯಲ್ಲಿ,
ತನ್ನಯ ವಿಶ್ವಾಸದಿಂದ ದೇವತಾಕಲೆ ಕುರುಹುಗೊಂಡಿತ್ತು.
ದೇವತಾಕಲೆ ತನ್ನ ತಾನಹಲ್ಲಿ ಇದಿರೆಡೆಯುಂಟೆ ?
ಸ್ಫಟಿಕದ ಘಟವರ್ತಿಯನೊಳಕೊಂಬುದಲ್ಲದೆ,
ಸ್ವಯರತ್ನ ಬಹುವರ್ಣಕ್ಕೊಳಗಪ್ಪುದೆ ?
ಇಂತಿವ ತಿಳಿದ ಸ್ವಾನುಭಾವಾತ್ಮಕನು.
ಲಕ್ಷಾಲಕ್ಷಂಗಳೆಂಬ ಭಿತ್ತಿಯ ಮೆಟ್ಟದೆ ನಿಶ್ಚಯವಾಗಿಹ ನಿಜಶರಣ ನೋಡಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.