ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (2) (2) (0) (0) (0) (0) (0) (0) (0) (0) (3) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ, ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ, ಉಭಯಚಿಂತನೆಯಾದರೂ ವೇದವೇದ್ಯರಲ್ಲ. ಅದೆಂತೆಂದಡೆ : ಮದವ ಸ್ವೀಕರಿಸಿದ ಮದೋನ್ಮತ್ತನಂತೆ, ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ, ವೇದಘಾತಕರಲ್ಲದೆ ವೇದವೇದ್ಯರಲ್ಲ. ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು, ತಾನೆಂಬ ಭಾವ ಏನೂ ಇಲ್ಲದೆ, ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ, ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ, ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ, ಭಾವ ನಿಜವಸ್ತುವಿನಲ್ಲಿ ವೇದ್ಥಿಸಿ ನಿಂದಾತನೇ ವೇದವೇದ್ಯ, ಲಲಾಮಬ್ಥೀಮಸಂಗಮೇಶ್ವರ ಲಿಂಗದೊಳಗಾದ ಶರಣ.
--------------
ವೇದಮೂರ್ತಿ ಸಂಗಣ್ಣ
ನೋಡುವ ದೃಷ್ಟಿಯು ಮುಟ್ಟಿದ ಮತ್ತೆ, ಇದಿರೆಡೆಯ ಕಾಬುದಿನ್ನೇನೊ ? ಕ್ರಿಯ ಸಂಪದಂಗಳ ಮರೆದು, ಅರಿವ ಅರಿವಿನ ತೆರನಿನ್ನೆಂತು ? ಸಕಲವೆಂದಲ್ಲಿ ಜಗ, ನಿಃಕಲವೆಂದಲ್ಲಿ ಕಾಬ ಲಕ್ಷ. ಕಂಡು ನಿಶ್ಚೆ ೈಸಿದಲ್ಲಿ ಕಂಡೆಹೆನೆಂಬ ಭ್ರಾಂತು ಕಾಣಿಸಿಕೊಂಡು ಇದಿರೆಡೆಗೊಟ್ಟುವದು, ಲಲಾಮಭೀಮಸಂಗಮೇಶ್ವರಲಿಂಗವನರಿದ ಶರಣ.
--------------
ವೇದಮೂರ್ತಿ ಸಂಗಣ್ಣ