ಅಥವಾ
(1) (1) (1) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (2) (2) (1) (0) (0) (1) (2) (0) (0) (0) (0) (0) (0) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾರ್ಯಪ್ರಯೋಜನವೆಂದಡೆಯೂ ಆರಿಗಾರಿಗೆಯೂ ಹೋಗಬಾರದು. ಬಟ್ಟವಕ್ಕದ ಸಂಸಾರ ಹೋಗಿ ಬರಬಾರದು. ಜವನ ಗಾರುಪಟ್ಟಿಗೊಳಗಾಗದ ಮುನ್ನ, ಶರಣೆಂದಡೆ ಕಾವನಮ್ಮ, ಶ್ರೀಮಲ್ಲಿಕಾರ್ಜುನಯ್ಯನು.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಕಲ್ಪಿತೋದಕವೊಂದು, ಅರ್ಪಣೋದಕ ಮೂರು, ಮತ್ತೆ ಅಂಗೋದಕತ್ರಯವಾಗಿಯೂ ಮಿಕ್ಕ ಪ್ರಸಾದೋದಕ ಅವು ಮೂರು. ಸತ್ವರಜತಮವನತಿಗಳೆದವರಿಗಲ್ಲದೆ, ಹತ್ತುಪಾದೋದಕವನರಿಯಲರಿದು. ತನು ಚಿತ್ತಶುದ್ಧನಾಗಿ ಗುರುಕರುಣದಿಂದವೆ ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಸಂದಿಲ್ಲದಿಹೆ. ಅವರು ನೀನು, ಮುತ್ತು ನೀರನು ಕೂಡಿದಾನಂದದ ಭೇದದೊಲು, ತತ್ತ್ವಮಸಿಯಪ್ಪನೈ ಶ್ರೀಮಲ್ಲಿಕಾರ್ಜುನಾ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ