ಕಲ್ಪಿತೋದಕವೊಂದು, ಅರ್ಪಣೋದಕ ಮೂರು,
ಮತ್ತೆ ಅಂಗೋದಕತ್ರಯವಾಗಿಯೂ
ಮಿಕ್ಕ ಪ್ರಸಾದೋದಕ ಅವು ಮೂರು.
ಸತ್ವರಜತಮವನತಿಗಳೆದವರಿಗಲ್ಲದೆ,
ಹತ್ತುಪಾದೋದಕವನರಿಯಲರಿದು.
ತನು ಚಿತ್ತಶುದ್ಧನಾಗಿ ಗುರುಕರುಣದಿಂದವೆ
ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಸಂದಿಲ್ಲದಿಹೆ.
ಅವರು ನೀನು, ಮುತ್ತು ನೀರನು ಕೂಡಿದಾನಂದದ ಭೇದದೊಲು,
ತತ್ತ್ವಮಸಿಯಪ್ಪನೈ ಶ್ರೀಮಲ್ಲಿಕಾರ್ಜುನಾ.