ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ.ಮಣ್ಣ ಮಡಕೆ ಒಕ್ಕಲಿಗನಲ್ಲಿ,ಚಿನ್ನದ ಮಡಕೆ ಅರಮನೆಯಲ್ಲಿ.ಅರಮನೆ ಗುರುಮನೆ ಹಿರಿದಾದ ಕಾರಣ-ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!
ಆಕಾರವೆಂಬೆನೆ ನಿರಾಕಾರವಾಗಿದೆನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.ತನ್ನನಳಿದು ನಿಜವುಳಿದಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡುಬದುಕಿದೆನು ಕಾಣಾ ಸಂಗನಬಸವಣ್ಣಾ.
ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ?ಆಶ್ರಯಿಸಬಹುದು ಪ್ರಭುವಿನ ನುಡಿಯ;ಆಶ್ರಯಿಸಬಹುದು ಹರಗಣಂಗಳ ನುಡಿಯ.ಅದೇನು ಕಾರಣವೆಂದಡೆ:ಕಾರಣವಿಲ್ಲದೆ ಕಂಡಂತಾದರು ತ್ರಿಪುರಾಂತಕಲಿಂಗ ಶರಣರುಚೆನ್ನಬಸವಯ್ಯಾ.