ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಜಾ.......[ನಂದ ನಿಬ್ರ್ಥಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ ನಿಶ್ಚಿಂತಾಮೃತವೆಂಬ ದಿವ್ಯಾಮೃತ ಕುಂಭವುಂಟು. ನಾಬ್ಥಿಸ್ಥಾನದೊಳಗೆ ಇದ್ದಂಥಾ ಮಹಾಕುಂಭದೊಳಗೆ ಮಹಾನುಭಾವವೆಂಬುದೊಂದು ಸುವರ್ಣಮಂಟಪವುಂಟು. ಆ ಸುವರ್ಣ ಮಂಟಪದೊಳಗೆ ರತ್ನಸಿಂಹಾಸನವೆಂಬ ಮಹಾಪೀಠಿಕೆಯುಂಟು. ಆ ಪೀಠಿಕೆಯ [ಮೇಲೆ] ಸಾಸಿರ ಅನಂತಕೋಟಿಪ್ರಭೆಯೊಳಗಣ ಕಳಾಸ್ವರೂಪವಪ್ಪುದೊಂದು ಪ್ರಾಣಲಿಂಗ. ಆ ರತ್ನಪೀಠಿಕೆಯ ಮೇಲೆ ಪ್ರಕಾಶಿಸುತ್ತಿರ್ಪ ಲಿಂಗ. ಆ ಲಿಂಗವೆ ತನ್ನ ಸ್ವಯಾನಂದದಿಂದ ಊಧ್ರ್ವವೆಂಬ ಚಕ್ರಸ್ಥಾನದೊಳಗೆ ನಿಂದು ನೋಡುತ್ತಿರಲು ಒಂದು ಕಮಲ ವಿಕಸಿತವಾಯಿತ್ತು. ಆ ಕಮಲದೊಳಗೊಂದು ದಿವ್ಯಜ್ಞಾನವೆಂಬುದೊಂದು [ಲಿಂಗ]. ತಲ್ಲಿಂಗ ತೊಳಗಿ ಬೆಳಗಿ ಪ್ರಕಾಶಿಸಿತ್ತು. ನೋಡುತಿರಲು ತಾನೆ ಪರಂಜ್ಯೋತಿ ದಿವ್ಯವಸ್ತು ಎಂದೆ ಕಾ[ಣಾ], ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗದರಿಕೆಯಾಗಿ.
--------------
ಬಾಚಿಕಾಯಕದ ಬಸವಣ್ಣ
ನಿರ್ವಯಲು ಸಾಮೀಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ ಸಕಲಸಾಮ್ರಾಜ್ಯವೆಂಬ ಶಿವಪುರವುಂಟು. ಆ ಪುರಕ್ಕೆ ವಜ್ರ ಮುತ್ತು ರತ್ನದಿಂದ ತೆತ್ತಿಸಿದ ಕೊತ್ತಳ. ಕೋಳು ಹೋಗದ ಮುಗಿಲಟ್ಟಣೆಯ ಪುರವನಾಳೆನೆಂಬುವರು. ಅಂದು ಆಗದು ಸರಸವಲ್ಲ. ಶಾಸ್ತ್ರದ ಕೊನೆಯ ಮೇಲಣ ಅವಧಾನದಂತೆ ತೋರಿಯಡಗುವ ವಿದ್ಯುಲ್ಲತೆಯಂತೆ ಬಯಲಲ್ಲಿ ಮೂಡುವ ಸುರಧನುವಿನಂತೆ ಮರೀಚಿಕದಂತೆ, ಕುಸುಮದ ನನೆಯಂತೆ [ದುಗ್ಧಘೃತ] ಮಿಶ್ರದಂತೆ ಮನದಲ್ಲಿಯೇ ವಾಸವಪ್ಪ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.
--------------
ಬಾಚಿಕಾಯಕದ ಬಸವಣ್ಣ
ನಿರಾಳದೊಳಗಣ ಲಿಂಗದ ನೆಲೆ ಹೇಂಗೆ ಇದ್ದಿತ್ತು ಎಂದಡೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಅಂಡವುಂಟು. ಆ ಅಂಡದೊಳಗೆ ಅಮೃತ ಸರೋದಯವೆಂಬ ಅಷ್ಟದಳಕಮಲವುಂಟು. ಆ ಕಮಲದಲ್ಲಿ ನಾಲ್ಕಾರು ಮಾಣಿಕ್ಯದ ಕಂಬವುಂಟು. ಆ ನಟ್ಟನಡುವಣ ನಾಲ್ಕುಮಾಣಿಕ್ಯದ ಕಂಬಕ್ಕೆ ನಾಲ್ಕು ನವರತ್ನದ ಬೋದಿಗೆಯುಂಟು. ನಾದವೆಂಬ ನಾಲ್ಕು ಲೋವೆ ನಡುವೆ ಸೋಮಸೂರ್ಯರೆಂಬೆರಡು ಹಲಗೆಯ ಹರಹಿ, ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶವೆಂಬ ಪಂಚರತ್ನದ ಹೃತ್ಕಮಲಕರ್ಣಿಕಾಕಮಲಮಧ್ಯದಲ್ಲಿ ರವೆಯ ಸುತ್ತು ಮುಚ್ಚಿ, ಅಲ್ಲಿಪ್ಪ ಲಿಂಗಕ್ಕೆ ತನುತ್ರಯ ಜ್ಯೋತಿಯ ಮಾಡಿ ನಿಮ್ಮ ಶರಣರ ಕಾಯವೇ ಕೈಲಾಸ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ
--------------
ಬಾಚಿಕಾಯಕದ ಬಸವಣ್ಣ
ನಿಶ್ಚಿಂತ ನಿರ್ಲೇಪ ಸಚ್ಚಿದಾನಂದ ಸ್ವರೂಪವಪ್ಪ ಶರಣನಲಿಂಗದಂಗವ ತೋರಯ್ಯ ಎಂದಡೆ ಶರಣ. ಶರಣರಿಗೆ ಬಿನ್ನಹಂ ಮಾಡುತ್ತಿರ್ದ, ನಿಮ್ಮ ಶರಣ ನಿಜಲಿಂಗದ ಕ್ರಮವ. ಭುವನಾಶ್ರಯವೆಂಬುದೊಂದು ಪದ್ಮಸಿಂಹಾಸನದ ಮೇಲೆ ಮಾಣಿಕ್ಯವರ್ಣದ ಲಿಂಗವುಂಟು. ಆ ಲಿಂಗವು ತನ್ನ ನಿಜಾಶ್ರಯವ ನೋಡುತ್ತಿರಲು ಅಲ್ಲಿ ಚಿದಂಗವೆಂಬ ಮಹಾಹೃತ್ಕಮಲದೊಳಗೆ ಉನ್ಮನಿಯಸ್ಥಾನವೆಂಬುದೊಂದು [ಉಂಟು]. ಬ್ರಹ್ಮಾನಂದಮಯವೆನಿಪ ನಿಜಾಮೃತಪಾನೀಯವೆಂಬ ಪಂಚರತ್ನದ ಕಳಸವುಂಟು. ಆ ಪಂಚರತ್ನದ ಕಳಸದ ಮೇಲೆ ಇಂಚರನೆಂಬ ಹಂಸನೆಂಬ ಪ್ರಾಣಲಿಂಗವು ಆತ್ಮಪ್ರಭಾಮಂಡಲದೊಳಗಿಹುದು. ಮಹಾಪ್ರಭೆಯಂ ನುಂಗಿದ ಲಿಂಗವು ಪದ್ಮಬ್ರಹ್ಮಾಂಡವೆಂಬುದೊಂದು ಆ ಲಯಸ್ಥಾನದಲ್ಲಿ ನೋಡುತ್ತಿರಲು ಅಲ್ಲಿಂದತ್ತ ಬಟ್ಟಬಯಲಾದ ಅಗಮ್ಯವೆಂಬ ಬಯಲು, ಆ ಲಿಂಗದೊಳಗಡಗಿ ನಿಂದ ಭಾವವು ತನ್ನೊಳು ತಾನೆ ಕಾಣಿಸಿತ್ತು. ಅದ ಚೆನ್ನಾಗಿ ತಿಳಿಯಬಲ್ಲಡೆ ಇನ್ನೇಕಯ್ಯಾ ಶಂಕೆ ? ನಿಃಕಳಂಕ ನಿಜಲಿಂಗವು ತಾನೆ ಎಂದಾತ, ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾಗಿ ಇದ್ದಿತ್ತು.
--------------
ಬಾಚಿಕಾಯಕದ ಬಸವಣ್ಣ