ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರವುತೋರಿಕೆಯೇನೂ ಇಲ್ಲದಂದು, ಮರವು ತೋರಿಕೆಯೇನೂ ಇಲ್ಲದಂದು, ಕುರುಹುತೋರಿಕೆ ಏನೂ ಇಲ್ಲದಂದು ಚಿನ್ನಾದ ಚಿದ್ಬಿಂದು ಚಿತ್ಕಳೆ ಇಲ್ಲದೆ ಏನೋ ಏನೋ ಆಗಿರ್ದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಜ್ಞಾನವಳಿದು ಸುಜ್ಞಾನಿಯಾಗಿ, ಅಂತರಂಗದವಗುಣವ ಹೊರಹಾಕಿ, ಅಂತಃಕರಣಗಳ ಕರಿಗೊಳಿಸಿ, ಮಾನಸಪೂಜೆಯ ಮನೋಹರವಾಗಿ, ಶುದ್ಧಸ್ಥಾವರಕ್ಕೆ ಪ್ರತಿಸ್ಥಾವರವಾಗಿ ಅಸ್ಥಿ ಚರ್ಮ ಮಜ್ಜೆ ಮಾಂಸ ರುಧಿರ-ಮೊದಲಾದವನೆಲ್ಲಾ ಶುಷ್ಕಗೊಳಿಸಿ, ಸುಮ್ಮನೆ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಂತಾದ ಕೈಲಾಸ ಮಹಾಮೂರ್ತಿಪರಮಾತ್ಮನು ತನ್ನ ವಕ್ಷ ಭಸ್ಮೋದ್ಭವ ರೇಣುರೂಪೆನಿಸಿದ ರೇಣುಕಾಖ್ಯ ತಾನಾಗಿ ಲೋಕಪಾವನಾರ್ಥವಾದ ನಾರದಮುನಿ ವಿನಂತಿಗೆ ಭೂವನಿತೆಯ ಭ್ರೂಮಧ್ಯ ಮಹಾಲಿಂಗವಾದ ಕೊಲ್ಲೀಪಾಕಿ ಸೋಮೇಶ್ವರನೊಳುದ್ಭವಿಸಿ, ಅರಿಯದೇಳುನೂರುವರ್ಷ ಸರ್ವೇಂದ್ರಿಯಗಳ ಶಿಕ್ಷಿಸಿ, ನಿಜತತ್ತ್ವ ತಿಳಿಯುವುದಕ್ಕೆ ತನ್ನ ಬಯಸುವರ್ಗೆ ತತ್ವೋಪದೇಶವ ಕೈಗೊಳಿಸಿ, ಸರ್ವತೀರ್ಥ ಸರ್ವದೇಶವ ನೋಡುವುದಕ್ಕೆ ಖೇಚರಿಯ ಗಮನದಲ್ಲಿ ನೋಡುತ್ತ ಸಂಚರಿಸುತಿರ್ದು ಮತ್ತೇಳ್ನೂರುವರ್ಷ ಲೋಕೋಪಕಾರವಾಗಿ ಸರ್ವಜನ ಅಭೀಷೆ*ಯನು ಸಲ್ಲಿಸಿ, ಮುನ್ನೂರು ರಾಜಕುಮಾರಿಯರ ಮದುವೆಯಾಗಿ, ಪೊಡವಿಡಿ ರುದ್ರಮುನಿಸ್ವಾಮಿಗಳ ಪಡೆದು, ಷಡ್ವಿಧಾಚಾರ್ಯರೊಳಗೆ ಪಂಚಾಚಾರ್ಯರಂ ಪ್ರತಿಷಿ*ಸಿ, ಪಂಚಬಗೆಯ ನಾಮವಿಟ್ಟು ಪಂಚಸಿಂಹಾಸನಕ್ಕೆ ಕರ್ತವ್ಯಮಾಡಿ ಘನಲಿಂಗ, ಅತೀತ, ಪಟ್ಟ, ಪರದೇಶಿ, ಮಹಾಂತ, ನಿರಂಜನನೆಂಬ ಆರರೊಳಗೆ ಐದು ಇದಿರಿಟ್ಟು, ರುದ್ರಮುನಿಸ್ವಾಮಿಗಳ ಪಾದದಲ್ಲಿ ಹಲವು ಶಿಷ್ಯರ ಪಡೆಸಿ, ಮಂತ್ರೋಪದೇಶವ ಕೊಡಿಸಿ, ಭುವನಜನ ಶಿಕ್ಷ ದೀಕ್ಷೋಪದೇಶಕ್ಕೆ ಕರ್ತೃತ್ವ ಕೈಗೂಡಿಸಿ, ದೇಶ ದೇಶದಲ್ಲಿ ನೆಲೆಗೊಳಿಸಿ ಸರ್ವಭೋಗ ಬಂಧ ಸುಖ ತನ್ನ ಪುತ್ರಂಗೆ ಇತ್ತು, ಪೊಡವಿಡಿ ರುದ್ರಮುನಿಸ್ವಾಮಿಯೆಂಬ ನಾಮ ಗುರ್ತಿಟ್ಟು ಬಹುನಾಮವನಂಗೀಕರಿಸಿ ಈ ಭುವನದಲ್ಲಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅನ್ಯವಿಲ್ಲದ ಅರ್ಚನವೆಂತೆಂದಡೆ : ``ನಿಷ್ಕಲಂ ನಿಗಮಾತೀತಂ ನಿಶ್ಶೂನ್ಯಂ ಶೂನ್ಯಮೇವ ಚ | ನಿರಂಜನಂ ನಿರಾಕಾರಂ ಸಾಕಾರಂ ಪರದರ್ಶನಂ || ನೀರೂಪಂ ಸ್ವರೂಪಂ ಚೈವ ನಿರ್ಗುಣಂ ಸಗುಣಂ ತತಃ | ಅದೃಶ್ಯ ದೃಶ್ಯಮಹಾಂತ ಸ್ವಯಂಭೂ ಫ್ರಭುವೇ ನಮಃ || ಮತ್ಕಲಾಂ ಚಿತ್ಕಲಾಂ ಚೈವ ಚಿದ್ರೂಪಂ ಚಿನ್ಮಯಂ ತತಃ | ಚಿತ್‍ಪ್ರಕಾಶಂ ಅಖಂಡೇಶಂ ಇಷ್ಟಲಿಂಗಾಕರಂ ದ್ವಯಂ || ಪಾದ್ಯಮಘ್ರ್ಯಂ ಆಚಮನಂ ಸರ್ವದೇವಸಮಾಹಿತಃ | ತದ್ರೂಪಂ ಸಲಿಲಂ ಸ್ವಾಹಾ ಮದೇವಸ್ನಾನಮಾಚರೇತ್ || ಏಕಮೇವಭವೇನ್ಮಾತ್ರಂ ಏಕಮಾತ್ರಂ ಭವೇನ್ಮನುಃ | ಏಕಮಂತ್ರಂ ಷಡಕ್ಷರಂ ಷಡಕ್ಷರಂ ಷಡಾನನಃ || ಷಡಾನನಃ ಭವೇತ್ತತ್ತ್ವಂ ತತ್ತಾ ್ವತೀತಂ ಅಸಂಖ್ಯಕಂ | ಯಥಾಚಿತ್ತಂ ತಥಾಕಾರಂ ತತ್ಫಲಂ ಸ್ವಶಿವಾರ್ಪಿತಂ ||'' ಇಂತೀ ಪರಿಯಲಿ ಜಲ ಗಂಧ ಪುಷ್ಪ ದೀಪ ಧೂಪ ನೈವೇದ್ಯ ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರ ಸರ್ವವು ತಾ ಮುಂತಾಗಿ ತನ್ನ ನಿಜದಲ್ಲಿ ನಿವೇದಿಸಲದೇ ಸದಾಚಾರ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅತತತತತ ಮಹೀಂದ್ರಜಾಲಿ ಜ್ಯಾಜ್ಯಾಜ್ಯಾಜ್ಯಾಜ್ಯಾ ಮಲನಾಡಚವಡಿ, ಛೀ ಕುರುಬರ ಪಿಡ್ಡಿ, ಛೀ ಹಲಗಿಸಕಿ ನಾಗಿ, ಗುಲು ಗುಲು ಗುಲು ಗುಲುಪುತ್ತ ಬಾ ಮತ್ತ ಬಾ ಅಹಾ ಉಪ್ ಮಂತ್ರ ಗಾಳಿ ಚೀಲ್ದಾಗಿಂದ ಬಾ ಕಿವಿಯೊಳಗೆ ಹೋಗು ಬಾಯೊಳಗಿಂದ ಬಾ ಮೂಗಿನೊಳಗ ಹೋಗು ಕಣ್ಣೊಳಗಿಂದ ಬಾ ತಲೆಯೊಳಗೆ ಹೋಗು ಬೆನ್ನೊಳಗಿಂದ ಬಾ ಮೈಯೊಳಗೆ ಹೋಗು ಅಂಗಾಲೊಳಗಿಂದ ಬಾ ಅಂಗೈಯೊಳಗೆ ಹೋಗು ಗಾಳಿಗೆ ಗಾಳಿ ಧೂಳಿಗೆ ಧೂಳಿ ಬೈಲಿಗೆ ಬೈಲು ನಿರ್ಬೈಲು ಮಹಾಂತಯೋಗಿ ಗಾಳಿಪೂಜಿ ಸುಡುಗಾಡಲಿಂದ ಬಂದೆವಯ್ಯಾ ಶಂಕರಪ್ರಿಯ ಚನ್ನಕದಂಬಲಿಂಗ ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅದೇ ಅದೇ ಎಂಬಲ್ಲಿ, ಇದು ಎಂಬುದುಂಟೆ ? ಅದು ಎಂದರೆ ವಸ್ತು, ಇದು ಅಂದರೆ ಅರಿವು. ಇದು ಹೋದ ಮ್ಯಾಲೆ ಅದು ಇರಲಿಲ್ಲಾ. ಕರ್ಪುರಕ್ಕೆ ಹತ್ತಿ ಉರಿವ ಉರಿ, ಆ ಕರ್ಪುರವು ಕರಗಿ ಹೋದ ಮೇಲೆ ಆ ಉರಿಯು ಏನಾಯಿತೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ