ಅಥವಾ

ಒಟ್ಟು 9 ಕಡೆಗಳಲ್ಲಿ , 7 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಬ್ಥಿಮಾನವ ಕೊಂಡ ಗುರುಲಿಂಗಜಂಗಮದ್ರೋಹಿಗಳ ಸಮಪಙÂ್ತಯಲ್ಲಿ ಅರ್ಚನಾರ್ಪಣಗಳ ಮಾಡ ನೋಡಾ. ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ. ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ. ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ. ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ. ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ, ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ. ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಬಯಲ ಪಟ್ಟಣದ ರಾಜಕುಮಾರನು ಮಲೆಯಪುರದಲ್ಲಿ ಶಿಕಾರಿಯ ಮಾಡಲು, ಆ ಪಟ್ಟಣದ ಬೀದಿಬಾಜಾರದೊಳಗೆ ಪದ್ಮಜಾತಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯ ಕೈಯೊಳಗಿನ ಕೋತಿಯ ವಿಲಾಸವನು, ಆ ಸ್ತ್ರೀಯ ರೂಪಲಾವಣ್ಯವನು, ರಾಜಕುಮಾರನು ಕಂಡು, ಬೆರಗಾಗಿ ಮರುಳುಗೊಂಡು, ಆ ನಾರಿಯ ವಾಸದೊಳಗೆ ಬಹುಕಾಲವಿರ್ದು, ಪಟ್ಟಣ ಪಾಳೆಯಲ್ಲಿ ಚರಿಸುತ್ತಿರಲು, ಅತ್ತಳ ಊರಿಂದ ಜೋಗಿ ಬಂದು ಪತ್ರವ ಕೊಡಲಾಗಿ ಆ ಪಟ್ಟಣ ಬೆದರಿ, ಪಾಳ್ಯ ಅಳಿದು, ಪಾಳ್ಯದ ನಾಯಕರು ಪಲಾಯನವಾಗಿ, ನಾರಿಯಮುಖ ವಿಕಾರವಾಗಿ, ಬಹುವರ್ಣದ ಕೋತಿ ಏಕವರ್ಣವಾಗಿ, ಆ ಹಸ್ತದೊಳಗಿನ ಪತ್ರವ ಸುಕುಮಾರ ನೋಡಿ, ಅಗ್ನಿಸ್ಪರ್ಶದ ಬೆಣ್ಣಿಯಂತೆ, ಜ್ಯೋತಿಯ ಸಂಗದ ಕರ್ಪೂರದಂತೆ, ಆ ಪತ್ರದಲ್ಲಿ ನಿರ್ವಯಲಾದುದು ಸೋಜಿಗ ಸೋಜಿಗವೆಂದನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರೊಳಗಣ ಘನಹೇರಡವಿಯೊಳೊಂದು ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರನೆರೆದು ಸಲುಹಲಿಕ್ಕೆ, ಅದು ಸಾರಾಯದ ಫಲವಾಯಿತ್ತಲ್ಲಾ ! ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರ ಸಂಸಾರಭವಕ್ಕೆ ಸಿಕ್ಕಿದ. ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದು ಅಚ್ಚಿಗೆ ನಾಲ್ಕು ಗಾಲಿ, ಒಂದೇ ಕೀಲು. ಎಂಟು ಕಂಬದ ಮಂಟಪದಲ್ಲಿ ಮಂಚದಮೇಲೆ ಜಗನ್ಮೋಹಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯಳ ಮಸ್ತಕದ ಮೇಲೊಂದು ನವರತ್ನಯುಕ್ತವಾದ ವಜ್ರದ ಪೆಟ್ಟಿಗೆಯಲ್ಲಿ ಬೆಲೆಯಿಲ್ಲದ ಒಂದು ಮಾಣಿಕ ಇರುವುದು. ಆ ಮಾಣಿಕಕ್ಕೆ ಇಬ್ಬರು ಹೆಣಗಾಡುತಿರ್ಪರು. ಅವರ ಹೆಣಗಾಟವ ಕಂಡು ಅತ್ತಣ ಊರಿಂದ ಒಬ್ಬ ಪುರುಷ ಬಂದು, ನಾಲ್ಕು ಗಾಲಿಯ ತುಂಡಿಸಿ, ಕೀಲನುಚ್ಚಿ, ಅಚ್ಚು ಮುರಿದು, ಅಷ್ಟಕಂಬದ ಮಂಟಪವ ಕೆಡಿಸಿ, ಮಂಚವ ಮೆಟ್ಟಿ, ಆ ಜಗನ್ಮೋಹಿನಿಯೆಂಬ ಸ್ತ್ರೀಯಳ ಕೈಕಾಲುತಲೆಹೊಡೆದು ಆ ಪೆಟ್ಟಿಗೆಯೊಳಗಣ ಮಾಣಿಕವ ತಕ್ಕೊಳ್ಳಬಲ್ಲರೆ ಆತನೇ ಅಸುಲಿಂಗಸಂಬಂಧಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅದಿರಿನ ತಲೆ, ಬಿದಿರಿದ ಬಾಯಿ, ಕಾಡಿನ ಹಕ್ಕೆ, ಓಡಿನ ಊಟಿ ಹತ್ತಿದ ಹೊಟ್ಟೆ, ಬತ್ತಿದ ಗಲ್ಲ, ಊರಿದ ಚರಣ, ಏರಿದ ಭಾಷೆ. ಇದು ಶರಣಂಗಲ್ಲದೆ ನಡುವಣ ಪುಕ್ಕಟವಾದವರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕತ್ತಲೆಯ ಪುರವ ಕಳ್ಳರು ಮುತ್ತಲು ಪುರಪತಿ ಮುತ್ತಿಗೆಗೆ ಒಳಗಾದನು ನೋಡಾ ಅಯ್ಯ. ಅತ್ತಳ ಊರಿಂದ ಬೆಳಗು ಪಸರಿಸಲು ಮುತ್ತಿಗೆ ತೆಗೆದೋಡಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕುರಿಕೋಳಿ ಕಿರುಮೀನ ತಿಂಬವರ ಊರೊಳಗೆ ಇರು ಎಂಬರು. ಅಮೃತಾನ್ನವ ಕರೆವ ಗೋವ ತಿಂಬವರ ಊರಿಂದ ಹೊರಗಿರು ಎಂಬರು. ಆ ತನು ಹರಿಗೋಲಾಯಿತ್ತು, ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು. ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ ತಿಂಬ ಗುಜ್ಜ ಹೊಲೆಯರ ಕಂಡಡೆ ಉದ್ದನ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊ[ಯ್ಯು]ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ. ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಬೆರಗಾಗಿ ನಿಲಲಾರೆನವ್ವಾ. ಆರವಸ್ಥೆ ಕರ ಹಿರಿದು ಎಲೆ ತಾಯೆ. ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ.
--------------
ಅಕ್ಕಮಹಾದೇವಿ
-->