ಅಥವಾ

ಒಟ್ಟು 154 ಕಡೆಗಳಲ್ಲಿ , 23 ವಚನಕಾರರು , 134 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ ಭೋಗವುಳ್ಳುದೆ ತಪ್ಪದೆಂಬೆಯಾದಡೆ, ಶರೀರಗಳಿಗಾಗಲಿ ಪ್ರೇರಕಹರ್ತುದಿಂದಲ್ಲವೆಂಬುದೆ ಪ್ರಮಾಣ. ಶಿವ ಪ್ರೀತ್ಯರ್ಥವಾದಗ......ಳು ಕರ್ತವನೆಯ್ದುವವೆಂಬುದಕ್ಕೆ ಪ್ರಮಾಣವು ಎನಲು, ಪಿತೃವಧೆಯಿಂದ ಚಂಡೇಶ್ವರನು ಅನುಪಮ ಗಣಪದವನೈದಿದನು. ಸಿರಿಯಾಳನು ತನ್ನ ಮಗನನೆ ಹತಿಸಿ ಪುರಜನ ಬಾಂಧವರುಸಹಿತ ಶಿವಲೋಕವನೈದನೆ ? ಕಾಲಾಂತರದಲ್ಲಿ ಮನುಚೋಳನು ಪುತ್ರವಧೆ ಭ್ರೋಣಹತ್ಯವನು ಮಾ ಎಸಗಿ, ತನುವರಸಿ ಶಿವಲೋಕವೆಯ್ದನೆ ? ಅಯ್ಯೋಮ ರಾಜನು ವಿಪ್ರೋತ್ತಮನನೆ ವದ್ಥಿಸಿ ಲಿಂಗ ಗರ್ಭಾಂತರವನೆಯ್ದಿದನೆ ? ಅಂದು ಜಗವರಿಯಲದಂತಿರಲಿ. `ಸ್ವರ್ಗಕಾಮೋ ಯಜೇತ'ಯೆಂಬ ಶ್ರುತಿಪ್ರಮಾಣಿಂ ದಕ್ಷ ಪ್ರಜಾಪತಿ ಕ್ರಿಯೆಗಳಿಗೆ ಅಧ್ವರ ಕರ್ಮದಿಂದ ಶಿರಚ್ಛೇದಿಯಾಗಿ ಕುರಿದಲೆ ಪಡೆಯನೆ ? ಬರೀ ಅಚೇತನ ಕರ್ಮಂಗಳು ಕೊಡಬಲ್ಲವೆ ಸದ್ಗತಿ ದುರ್ಗತಿಗಳನು ? ಕರ್ತು ಪ್ರೇರಕ ಶಿವನಲ್ಲದೆ, `ಮನ್ನಿಮಿತ್ತಕೃತಂ ಪಾಪಮಪೀಡಾವಚಯೈ ಕಲ್ಪ್ಯತೇ' ಎನಲು, ಇಂತೀ ಚಿಟಿಮಿಟಿವಾದವೆಂಬುದು ಕೊಳ್ಳವು ಕೇಳಾ. ಶಿವಭಕ್ತಿಯೆಂಬ ಪ್ರಚಂಡ ರವಿಕಿರಣದ ಮುಂದೆ ಸಾಮಾನ್ಯಕರ್ಮವೆಂಬ ತಮ ನಿಲುವುದೆ ? ಮರುಳೆ ಆ `ವೋರಾಜಾನಮಧ್ವರಸ್ಯ ರುದ್ರಗಂ' ಎನಲು, `ಇಂದ್ರ ಉಪೇಂದ್ರಾಯ ಸ್ವಾಹಾ' ಎನಬಹುದೆ ? ಪ್ರಥಮಾಹುತಿಯಲ್ಲಿಯೆಂದು ಬೆಳಲು ಭಸ್ಮವಹವಾ ಆಹುತಿ ಫಲಂಗಳು. ಆದಡೆ ಕೆಳೆಯಾ ಶಿವಭಕ್ತಿಬಾಹ್ಯವಾದ ಪಾಪಕರ್ಮಕೆ ಬಂದ ವಿಪರೀತ ಪ್ರಾಪ್ತಿಗಳು, ವಿಷ್ಣು ಸುರರಿಗೆ ಹಿತವಾಗಿ ಭೃಗು ಸತಿಯ ಶಿರವನರಿದಡೆ, ಕರ್ಮ ದಶಜನ್ಮಂಗಳಿಗೆ ತಂದು, ಹೀನಪ್ರಾಣಿಗಳ ಯೋನಿಯಲ್ಲಿ ಬರಸಿದುದನರಿಯಿರೆ. ಮತ್ತೆಯೂ ಬಾಲೆಯ ಕೊಂದ ಕರ್ಮ ಕೃಷ್ಣಾವತಾರದಲ್ಲಿ ವ್ಯಾಧನಿಂದ ತನ್ನ ಕೊಲ್ಲಿಸಿತ್ತು. ಮತ್ತೆಯೂ ಬಲಿಯ ಬಂದ್ಥಿಸಿದ ಕರ್ಮ ಮುಂದೆ ನಾಗಾರ್ಜುನನಿಂದ ಕಟ್ಟಿಸಿತ್ತು, ಕೌರವಕುಲದ ಕೊಲಿಸಿದ ಕರ್ಮಫಲ ತನ್ನ ಯಾದವ ಕುಲವ ಕೊಲಿಸಿತ್ತು. ಮತ್ತಾ ಲೀಲೆಯಿಂದ ಮತ್ತೆಯೂ ಪರ್ವತನಾರಂದರ ಸತಿಯ ಬಲುಮೆ, ಇಂತೆ ಕೊಂಡ ಕರ್ಮಫಲ ರಾವಣಗೊಪ್ಪಿಸಿತ್ತು. ತನ್ನ ಪ್ರಿಯತಮೆಯೆನಿಸುವ ಸೀತಾಂಗನೆಯ ಇನ್ನು ಮಿಕ್ಕಿನ ದೇವದಾನವಮಾನವರನೊಕ್ಕಲಿಕ್ಕಿಯಾಡದಿಹುದೆಯಾ ಕರ್ಮವು. ಆದಡಾ ಕರ್ಮವು ಸ್ವತಂತ್ರವೋ, ಪರತಂತ್ರವೋ ಎಂಬೆಯಾದಡೆ, ಆ ಕರ್ಮ ಈಶ್ವರಾಜೆÕಯಲ್ಲದ ಕರ್ಮಿ ತಾನಾದಂತೆ, ಇದಂ ಗುರು ಕನಿಷ್ಠಾಧಮಮಧ್ಯಮ ಕ್ರಿಯೆಗಳಿಂ ವಿದ್ಥಿಸಿದ ವಿದ್ಥಿಗಳಿಂ, ವಿದ್ಥಿನಿಷೇಧ ಕರ್ಮಂಗಳೆಂಬ ಸಮೂಹಕರ್ಮಗಳಿಗೆ ತಾರತಮ್ಯವಿಡಿದು, ಪುಣ್ಯಪಾಪಂಗಳ ನಿರ್ಮಿಸಿ, ಅಜಾÕನಿಪಿತವ ಮಾಡಿದನೀಶ್ವರನು. ನಾಕನರಕಾದಿಗಳೆ ಸಾಧನವಾಗಿ, ಕರ್ಮಕರ್ತನನೆಯ್ದುವರೆ, ಕರ್ಮ ಕರ್ತನು ಈಶ್ವರನಾದಡೆ ಕರ್ಮನಿ ಶ್ವರಾಜೆÕಯಿಂದೈದುವಡೆ, ಆ ಕರ್ಮ ಕರ್ತನಹ ಈಶ್ವರನನು ಬ್ರಹ್ಮನ ಮೇಲ್ದಲೆಯನರಿದುದಲಾ. ಆ ಕರ್ಮ ಆತನನೆಯ್ದುದುಮೆನಲು, ಅಹಂಗಾಗದು. ವಿರಿಂಚನು ರಜೋಗುಣಹಂಕಾರದಿಂ ಸುರ ಕಿನ್ನರ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರು ತಮ್ಮೊಳು ಬ್ರಹ್ಮವಾದದಿಂ ಸಂಪಾದಿಸಿ ತಿಳಿಯಲರಿಯದೆ, ಬ್ರಹ್ಮನಂ ಬೆಸಗೊಳಲು, ಬೊಮ್ಮವಾನೆನಲು, ಆ ಕ್ಷಣಂ ಗಗನದೊಳು ತೋರ್ಪ ಅತ್ಯನುಪಮ ದೇದೀಪ್ಯಮಾನ ತೇಜಃಪುಂಜ ಜ್ಯೋತಿರ್ಲಿಂಗಾಕಾರಮಂ ತೋರಲಾ ಬ್ರಹ್ಮೇಶ್ವರರು ಆ ವಸ್ತುನಿರ್ದೇಶಮಂ ಮಾಳ್ಪೆನೆಂದು ಪಿತಾಮಹನು ಚತುಸ್ಶಿರ ಮಧ್ಯದಲ್ಲಿ ಮೇಲ್ದಲೆಯಂ ಪುಟ್ಟಿಸಿ, ||ಶ್ರುತಿ|| `ಋತಂ ಸತ್ಯಂ ಪರಂ ಬ್ರಹ್ಮ'ಯೆಂದು ಋಗ್ಯಜುಸ್ಸಿನಲ್ಲಿ ನುತಿಸುತ್ತಂ ಇರಲು, ಬ್ರಹ್ಮಾದ್ಥಿಪತಿ ತತ್ಪರ ಬ್ರಹ್ಮಶಿವ ಇತಿ ಒಂ, ಇತಿ ಬ್ರಹ್ಮಾ ಇತಿ. ಇಂತೀ ಶ್ರುತಿ ಸಮೂಹವೆಲ್ಲವು ಶಿವನನೆ ಪರಬ್ರಹ್ಮವೆಂದು ಲಕ್ಷಿಸಿ, ಮತ್ತತನದಿಂ ಮರದೂ ಅಬ್ರಹ್ಮವೆನಲುಂ ದ್ರುಹಿಣನ ಮೇಲ್ದಲೆಯಂ ಅಪ್ರತಿಮ ತೇಜೋಮಯ ಲೀಲಾಲೋಲಾ ಶೀಲ ದುಷ್ಟನಿಗ್ರಹಿ ಶಿಷ್ಟ ಪ್ರತಿಪಾಲಕನನೆಯಾಕ್ಷಣಂ, ಘನರೌದ್ರ ಕೋಪಾಟೋಪಿಯೆನಿಸುವ ಕಾಲರುದ್ರಂ ಸಮೀಪಸ್ಥನಾಗಿರ್ದು, ಜ್ಯೇಷ್ಠಾ ತರ್ಜನಾಂಗುಲಿ ನಖಮುಖದಿಂ ಛೇದಿಸಲು, ವಿದ್ಥಿ ಭಯಾತುರನಾಗಿ `ಒಂ ನಮೋ ದೇವಾಯ ದೇವ್ಯೈ ನಮಃ, ಸೋಮಾಯ ಉಮಾಯೈ ನಮಃ' ಎಂದು ಸೋಮಾಷ್ಟಕದಿಂ ಸ್ತುತಿಸಿ, ನಮಿಸಿಯಜಿಸಿ ಮೆಚ್ಚಿಸಿ, ಸ್ವಾಮಿ ಸರ್ವೇಶ್ವರ, ಯ್ಯೋಮಕೇಶ, ದೇವದೇವ ಮಹಾಪ್ರಸಾದ. ಈ ಶಿರಮಂ ಬಿಸಾಟದಿರಿ, ಬಿಸಾಟಲು ಪುರತ್ರಯ ಜಗಮಳಿಗುತ್ತಂ ನಿಮಿತ್ತಂ ಪರಮ ಕೃಪಾನಿದ್ಥಿ ಪರಬ್ರಹ್ಮ ಪರಂಜ್ಯೋತಿ ಪರಮೇಶ್ವರ ಪರಮಭಟ್ಟಾರಕ ಪರಾತ್ಪರತರಸದಕ್ಷರ ಚಿನ್ಮೂರ್ತಿ ಸ್ವಯಂಭೋ ಸ್ವಾತಂತ್ರೇಶ್ವರಾಯೆನುತ ಕೀರ್ತಿಸುತ್ತಿರಲು, ಪರಬ್ರಹ್ಮ ನಿರೂಪದಿಂ ಕಾಲರುದ್ರನ ಕಪಾಲಮಂ ಧರಿಸಿದನಂದು. ಇನ್ನೆಮಗಿದೆ ಮತವೆಂದು ಸರ್ವದೆ ತಾ ಗರ್ವ ಕಂಡೂಷಮಂ ಉರ್ವಿಯೊಳೀಗಮೆ ತೀರ್ಚಿಪೆನೆಂದು ಪಿಡಿದು ನಡೆದಂ ಬ್ಥಿP್ಷ್ಞಟನಕಂದು. ಅಹಲ್ಯೆ ಸಾಯಿತ್ತಿದು, ಕರ ಹೊಸತು ಇನಿತರಿಂದ ಕಾಲರುದ್ರಂಗೆ ಬ್ರಹ್ಮೇತಿಯಾಯಿತ್ತೆಂಬ ಕರ್ಮವಾದಿ ಕೇಳಾದಡೆ. ||ಶಾಮಶ್ರುತಿ|| `ತ್ವಂ ದೇವೇಷು ಬ್ರಾಹ್ಮಣಾಹ್ವಯಃದುನುಷ್ಯೋಮನುಷ್ಯೇಮ ಬ್ರಾಹ್ಮಣಾಮುಪದಾವತ್ಯುಪದಾರತ್ಯಾ' ಎನಲು, `ಬ್ರಾಹ್ಮಣೋ ಭಗವಾನ್ ರುದ್ರಃ' ಎನಲು, `ಕ್ಷತ್ರಿಯಃ ಪರಮೋ ಹರಿಃ' ಎನುತಿರಲು, `ಪಿತಾಮಹಸ್ತು ವೈಶ್ಯಸಾತ್' ಎನಲು, ಬ್ರಾಹ್ಮಣೋತ್ತಮ ಬ್ರಾಹ್ಮಣಾದಿ ಪತಿ ಪರಬ್ರಹ್ಮವಿದ್ದಂತೆ. ತಾನೆ ಪರಬ್ರಹ್ಮಮೆನಲಾ ವಿದ್ಥಿಯ ಶಿಕ್ಷಿಪದು ವಿದಿತವಲ್ಲದೆ ನಿಷೇಧವಲ್ಲ. ಅದೆಂತೆನಲು, ಭೂಚಕ್ರವಳಯದೊಳು ಭೂಮೀಶನು ಅನ್ಯಾಯಗಳ ಶಿಕ್ಷಿಸಿದ ಭೂರಕ್ಷಣ್ಯವು, ಲೋಕಹಿತವಲ್ಲದೆ ದೋಷ ಸಾಧನಮೆಯೆಲ್ಲಾ, ಪಾಪಿಗೆ ತಕ್ಕ ಪ್ರಾಯಶ್ಚಿತ್ತಮೆಂದುಂಟಾಗಿ. ಇದು ಕಾರಣ, ಶಿಕ್ಷಯೋಗ್ಯನ ಶಿಕ್ಷಿಸಿದವದ ದೋಷವಿಲ್ಲೆಂದು ಭಾಟ್ಠ(?) ದೊಳೊಂದು ಪಕ್ಷಮಿರೆ, ಮತ್ತಮದಲ್ಲದೆ, ಅದೊಮ್ಮೆ ಹತ್ತುತಲೆಯವನಂ ಅತ್ಯುಗ್ರದಿಂ ವಂದಿಸಿದ ಶ್ರೀರಾಮಂಗೆ ಬ್ರಹ್ಮಹತ್ಯಾ ಬ್ರಹ್ಮಕರ್ಮ ವಿದ್ಯಾಬ್ರಹ್ಮರಿಂದಾವಾವ ಪ್ರಾಯಶ್ಚಿತ್ತದಿಂತೆಮ್ಮನೆ ಕೆಡದಿರಲು, ಆ ರಾಮಂ ಆ ರಾವಣಹತ ದೋಷನಿರುಹರಣಕ್ಕಾವುದು ಕಾಣದಿರಲು, ಶಂಭುಪೌರಾಣಿಕನೆಂಬ ನಾಮವಂ ತಾಳ್ದು, ಶಿವಂ ರಾಮಂಗೆ ಪ್ರತ್ಯಕ್ಷಮಾಗಿ, ಈ ದೋಷಕ್ಕೆ ಲಿಂಗಪ್ರತಿಷ್ಠೆಯ ನಿರೋಹರಣಮೆಂದರುಪಿ, ಅರಿದಾ ರಾಮಂಗಂ ಗಂಧಮಾದ ಪರ್ವತವೇ ಆದಿಯಾಗಿ, ಅದನು ಕೋಟೆಯ ಅವದ್ಥಿಯಾಗಿ ಶಿವಲಿಂಗಪ್ರತಿಷ್ಠೆಯಂ ಮಾಡೆ, ರಾಮೇಶ್ವರಲಿಂಗಮೆನಿಪ್ಪ ನಾಮಾಂಕಿತದಿಂ ತಕವಕ ಮಿಗೆವರಿದು ಸ್ವಾತ್ವಿಕಭಕ್ತಿಭಾವದಿಂದರ್ಚಿಸಿ ಸ್ತುತಿಸಿ, ಭೂವಳಯದೊಳೆಲ್ಲಂ ಪ್ರದಕ್ಷಿಣ ಮುಖದಿಂ ಶಿವಲಿಂಗಾಲಯಮನೆತ್ತಿಸಿ, ಅಂತಾ ಸಹಸ್ರಾವದ್ಥಿಯೆನಿಸುವ ದಶಗ್ರೀವ ವಧೆಯಂ ಪರಿಹರಿಸಿದ ಹಾಗೆ, ಶ್ರೀಮನ್ಮಹಾದೇವನೂ ದೇವಾದಿದೇವನೂ ದೇವಚಕ್ರವರ್ತಿ ದೇವಭಟ್ಟಾರಕನೂ ದೇವವೇಶ್ಯಾಭುಜಂಗನೂ ಸರ್ವದೇವತಾ ನಿಸ್ತಾರಕನೂ ಸರ್ವದೇವತಾ ಯಂತ್ರವಾಹಕನೂ ಒಂದಾನೊಂದೆಡೆಯಲ್ಲಿ ಮಹಾದೇವೇಶ್ವರನು ರುದ್ರೇಶ್ವರನು ಈಶ್ವರೇಶ್ವರನು ಶಂಕರೇಶ್ವರನೆನಿಪ ನಾಮಂಗಳಿಂ, ಭೂವಳಯದೊಳು ಲಿಂಗಪ್ರತಿಷ್ಠೆಯಂ ಬ್ರಹ್ಮಶಿರಚ್ಛೇದನ ನಿಮಿತ್ಯನಂ ಮಾಡಿದುದುಳ್ಳಡೆ, ಹೇಳಿರೆ ಕರ್ಮವಾದಿಗಳು. ಅಂತುಮದಲ್ಲದೆಯುಂ ಆ ಉಗ್ರನಿಂದಂ ಪಿತಾಮಹಂ ಅವದ್ಥಿಗಡಿಗೆ ಮಡಿವುದಂ ಕೇಳರಿಯಿರೆ. ಅದಲ್ಲದೆಯುಂ, ದP್ಷ್ಞಧ್ವರದೊಳಾ ದಕ್ಷ ಪ್ರಜಾಪತಿಯ ಶಿರವನರಿದು, ಕರಿಯದಲೆಯನೆತ್ತಿಸಿದ. ಅದಲ್ಲದೆಯುಂ ಸುತೆಗಳುಪಿದ ವಿರಂಚಿ ಹತಿಸಿದಂದು, ಅದಲ್ಲದೆಯುಂ ಸಮಸ್ತದೇವತೆಗಳ ಆಹಾರ ತೃಪ್ತಿಗೆ ಬೇಹ ಅಮೃತತರನಂ ಚರಣಾಂಗುಷ್ಠದಿಂದೊರಸಿದಂದು, ಅದಲ್ಲದೆಯುಂ ವಿಷ್ಣು ತಾನೆಯೆನಿಪ ವಿಶ್ವಕ್ಸೇನನ ತ್ರಿಶೂಲದಿಂದಿರಿದೆತ್ತಿ ಹೆಗಲೊಳಿಟ್ಟಂದು, ಅದಲ್ಲದೆಯುಂ ಮತ್ಸ್ಯ ಕೂರ್ಮ ವರಾಹ ನಾರಸಿಂಹ ತ್ರಿವಿಕ್ರಮಾದಿಗಳಂ ಮುಂದುವರಿದು ಕೊಂದಂದು ಅದಲ್ಲದೆಯುಂ ದೇವಿದ್ವಿಜರಿಗೆ ಗುರುವೆನಿಸುವ ಪಾವಕನ ಏಳು ನಾರಿಗೆಗಳ ಕೀಳುವಂದು, ಅದಲ್ಲದೆಯುಂ ಯಜÕವಾಟದೊಳು ಪ್ರಾಜÕನೆನಿಸುವ ಪೂಶಾದಿತ್ಯನ ಹಲ್ಲ ಕಳದು, ಭಾಗಾದಿತ್ಯನಂ ಮೀಂಟಿ ವಾಣಿಯ ಮೂಗಂ ಮಾಣದೆ ಕೊಯ, ದೇವಮಾತೃಕೆಯರ ದೊಲೆ ನಾಶಿಕವ ಚಿವುಟಿದಂದು, ಅದಲ್ಲದೆಯುಂ ಬ್ರಹ್ಮಾಂಡಕೋಟಿಗಳನೊಮ್ಮೆ ನಿಟಿಲತಟನಯನಂ ಲಟಲಟಿಸಿ ಶೀಘ್ರದಿಂದ ಸುಡಲು, ಸುರಾಸುರ ಮುನಿನಿವಹ ಹರಿಹಿರಣ್ಯಗರ್ಭರು ಶತಕೋಟಿ ಹತವಾದಂದು, ಪ್ರೊರ್ದದಾ ಬ್ರಹ್ಮಹತ್ಯಂ ನಿರ್ಧರಮಾಗಿ ಬೊಮ್ಮನ ಮೇಲ್ದಲೆಯೊಂದ ಚಿವುಟಿದುದರಿಂದಂ ಒಮ್ಮೆಯ ಶೂಲಪಾಣಿಗೆ ಬ್ರಹ್ಮೇತಿಯಾದುದತಿಚೋದ್ಯ ಚೋದ್ಯ. ಅವಲ್ಲದೆಯೂ ಬ್ರಹ್ಮ ಸಾಯನು. ಅಂಗಹೀನಮಾದುದಲ್ಲದೆ ಹೋಗಲಾ ಸಾಮಾನ್ಯ ಚರ್ಚೆ ಕರ್ಮಗತ ಕರ್ಮಿಯೆನಿಸುವ ನಿನ್ನ ಕರ್ಮವಾದವೆಲ್ಲಿಗೂ ಸಲ್ಲದು. ಬ್ರಹ್ಮಮಸ್ತಧಾರಣ ಲೀಲಾಲೋಲ ಶೀಲಬ್ರಹ್ಮೇಶ್ವರ ಪರಬ್ರಹ್ಮ ಶ್ರೀಮನ್ಮಹಾದೇವನ ನಾಮಕೀರ್ತನ ಮುತ್ರದಿಂದು ಬ್ರಹ್ಮಹತ್ಯಕೋಟಿಗಳುಂ ಮಹಾಪಾತಕವಗಣಿತಂ ನಿರಿಗೆಣೆಯಾದಕೂಲಮಂ ಭರದೊಳನಲ ಗ್ರಹಿಸಿದಂತಾಗುಮೆನೆ. ಬ್ರಹ್ಮ ಪಂಚಬ್ರಹ್ಮಮೆನಲು ಬ್ರಹ್ಮಪಾಪಕಾಶಿಯೆನಲು, ಶಿವಲಿಂಗ ದರ್ಶನ ಮಾತ್ರ ಬ್ರಹ್ಮಹತ್ಯವಳಿವವೆನಲು, ಆ ಶಿವನೆ ಬ್ರಹ್ಮಹತ್ಯವೆ ಇದುಯೆಂಬುದು ಮೊಲನ ಕೋಡಿನಂತೆ. ಇದು ಕಾರಣ, ಕರ್ಮ ಶಿವನಾಜೆÕವಿಡಿದು ಕರ್ಮಿಯ ಗ್ರಹಿಸೂದು. ಕರ್ಮಸಾರಿಯಲಿ ಕರ್ಮ ನಿರ್ಮಲಕರ್ಮ ಕಾರಣ ಕರ್ತೃವೆಂದರಿಯದಡೆ, ಎಲೆ ಕರ್ಮವಾದಿ, ನಿನಗೆ ಗತಿ ಉಂಟೆಂದುದು, ಬಸವಪ್ರಿಯ ಕೂಡಲಚೆನ್ನಸಂಗನ ವಚನ. || 65 ||
--------------
ಸಂಗಮೇಶ್ವರದ ಅಪ್ಪಣ್ಣ
ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಾಮನ ಕೊಂದು ಪಟ್ಟಕ್ಕೆ ನಿಂದ ಕಾಮರಾಜರಾಜನು, ರಾಜಾದ್ಥಿರಾಜನು. ಗಂಡರನೆಲ್ಲರ ಹೆಂಡಿರ ಮಾಡಿ ನೆರೆವ ವೈಶಿಕ, ಕಾಮಿನೀ ಕೇಳಾ, ಇಂತಪ್ಪ ಕಾಮಿ ಎನಗತಿ ಕಾಮಿಸಿ ನೆರೆದು ಕಾಮಸಿದ್ಧಿಯನೀವನು ಉರಿಲಿಂಗದೇವನು.
--------------
ಉರಿಲಿಂಗದೇವ
`ನೀನು' `ನಾನು' ಎಂಬ ಉಭಯಸಂಗವಳಿದು ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು, ಬಟ್ಟಬಯಲು ಕಾಣಬಹುದು ನೋಡಾ ! ಆ ಬಯಲ ಬೆರಸುವಡೆ_ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ ! ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ ! ನಡೆ ಅಲ್ಲಿಗೆ ತಾಯೆ, ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
--------------
ಅಲ್ಲಮಪ್ರಭುದೇವರು
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ, ಮೀಯದೆ ಮೀನು ? ಮೀಯದೆ ಮೊಸಳೆ ? ತಾ ಮಿಂದು, ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?
--------------
ಅಲ್ಲಮಪ್ರಭುದೇವರು
ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ ! ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ ಬಸವ ಮೊದಲಾದ ಪ್ರಮಥರೆಲ್ಲ ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ, ಮಹಾಲಿಂಗೈಕ್ಯಾನುಭಾವವ ಬೆಸಗೊಳಲು ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನಿಯನೆನಗೆ ನೀನು, ಇನ್ನೇನನೊಂದ ನಾನರಿಯೆ. ನೀ ನುಡಿಸಲು ನುಡಿವೆನು, ನಡೆಸಲು ನಡೆವೆನು, ನೀನಲ್ಲದರಿಯೆನು, ನಲ್ಲ ನೀ ಕೇಳಾ. ನೀನೇ ಗತಿ, ನೀನೇ ಮತಿ. ನಿನ್ನಾಣೆಯಯ್ಯಾ, ಉರಿಲಿಂಗದೇವಾ.
--------------
ಉರಿಲಿಂಗದೇವ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ; ಗುರುವಿನ ಗದ್ದುಗೆ ಬೇಕಿಲ್ಲ ; ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ. ಕಾಲ ಬಲ್ಲಿದನೆಂದಡೆ ಕೆಡಹಿ ತುಳಿದ. ಎಲೆ ಅವ್ವಾ, ನೀನು ಕೇಳಾ ತಾಯೆ. ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ. ಎಲೆ ಅವ್ವಾ ನೀನು ಕೇಳಾ ತಾಯೆ. ವಿಷ್ಣು ಬಲ್ಲಿದನೆಂದಡೆ ಆಕಳ ಕಾಯ್ದಿರಿಸಿದ. ತ್ರಿಪುರದ ಕೋಟೆ ಬಲ್ಲಿತ್ತೆಂದಡೆ ನೊಸಲಕಂಗಳಲುರುಹಿದನವ್ವಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ, ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ.
--------------
ಅಕ್ಕಮಹಾದೇವಿ
ನಿಮ್ಮ ನುಡಿಯ ಇರವಿನಂತೆ, ಪ್ರಮಥರ ಇರವೊ, ನಿಮ್ಮ ಇರವೊ? ಒಂದಕ್ಕೊಂದು ಒಂದಕ್ಕೊಂಬತ್ತು ಮಾಡಿ ನುಡಿದಡೆ, ಸಹಜವೆಂಬುವ ಭಾವ ಅದೆಂತು? ಕಪಿಲಸಿದ್ಧಮಲ್ಲಿಕಾರ್ಜುನ ಶರಣರಲ್ಲಿ ಸಹಜಪ್ರೇಮವುಳ್ಳಡೆ, ಸಕಲರ ನುಡಿಯೆ ಇಷ್ಟ ಕೇಳಾ, ಕಿನ್ನರಯ್ಯಾ.
--------------
ಸಿದ್ಧರಾಮೇಶ್ವರ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ? ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ. ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಢಿಯ ಕೂಟ ಸಮನಿಸದು ಕೇಳಾ.
--------------
ಮುಕ್ತಾಯಕ್ಕ
ಇನ್ನಷ್ಟು ... -->