ಅಥವಾ

ಒಟ್ಟು 11 ಕಡೆಗಳಲ್ಲಿ , 7 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೊಂದು ಪ್ರಕಾರದ ಅಂಗತ್ರಯವೆಂತೆಂದಡೆ : ಪ್ರಾಜಾÕತ್ಮನೆ ಯೋಗಾಂಗ, ತೈಜಸಾತ್ಮನೆ ಭೋಗಾಂಗ, ವಿಶ್ವಾತ್ಮನೆ ತ್ಯಾಗಾಂಗ. ಇದಕ್ಕೆ ಮಹಾದೇವ ಉವಾಚ : ``ಏ ಯೋಗಾಂಗಂ ಪ್ರಾಜÕವಸ್ಯಾತ್ ಭೋಗಾಂಗಂ ತೈಜಸಾ ಭವೇತ್ | ತ್ಯಾಗಾಂಗಂ ವಿಶ್ವಮೇ ವಸ್ಯಾತ್ ಪರಮಾರ್ಥನಿರೂಪಣೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನೊಂದು ಪ್ರಕಾರದ ಅಂಗಸ್ಥಲವೆಂತೆಂದಡೆ : ಐಕ್ಯ ಶರಣಸ್ಥಲವೆರಡು ಯೋಗಾಂಗ. ಪ್ರಾಣಲಿಂಗಿ ಪ್ರಸಾದಿಸ್ಥಲವೆರಡು ಭೋಗಾಂಗ. ಮಾಹೇಶ್ವರ ಭಕ್ತಸ್ಥಲವೆರಡು ತ್ಯಾಗಾಂಗ. ಇದಕ್ಕೆ ಈಶ್ವರ್ದೋವಾಚ : ``ಯೋಗಾಂಗಮೈಕ್ಯಂ ಶರಣಂ ಸ್ಥಲಮಿತ್ಯುಭಯಂ ಭವೇತ್ | ಪ್ರಾಣಲಿಂಗಂ ಪ್ರಸಾದೀತಿ ದ್ವಯಂ ಭೋಗಾಂಗಮಿಷ್ಯತೇ || ಮಾಹೇಶ್ವರಸ್ಥಲಂ ಭಕ್ತಸ್ಥಲಮಿತ್ಯುಭಯಸ್ತಥಾ | ತ್ಯಾಗಾಂಗಂ ಭವೇನ್ನಿತ್ಯಂ ಪ್ರೋಚ್ಯತೇ ಪಾರಮಾರ್ಥಿಕೈಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ಎಮ್ಮೆ ಶರಣರು, ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು, ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು, ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ, ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು, ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು, ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಯೋಗಾಂಗ ಭೋಗಾಂಗ ತ್ಯಾಗಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ನಮ್ಮ ಶರಣರು. ಗುರು ಲಿಂಗ ಜಂಗಮ ಈ ತ್ರಿವಿಧವನು, ಸುಖ ದುಃಖ ಚಿಂತೆ ಸಂತೋಷವೆಂಬುವ ಕಳೆದು, ಉತ್ಪತ್ತಿ ಸ್ಥಿತಿಲಯವೆಂಬುವಂ ಸುಟ್ಟು, ದೃಕ್ಕು ದೃಶ್ಯ ನಿಜವೆಂಬ ತ್ರಿಕರಣವ ಏಕವ ಮಾಡಿ, ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು, ಸಂದಹರಿದು ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ, ಎನ್ನ ಬಂಧನ ಹರಿದು, ನಾನು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ದೀಕ್ಷಾಗುರುವಾದಲ್ಲಿ ತ್ರಿವಿಧದ ಆಸೆಯಿಲ್ಲದಿರಬೇಕು. ಶಿಕ್ಷಾಗುರುವಾದಲ್ಲಿ ಅರಿಗಳಿಗಂಜದೆ ಪ್ರಾಣತ್ಯಾಗನಿಶ್ಚಯನಾಗಿರಬೇಕು. ಮೋಕ್ಷಗುರುವಾದಲ್ಲಿ ಸರ್ವದೋಷ ಸರ್ವೇಂದ್ರಿಯ ನಾಶನಾಗಿರಬೇಕು. ಇಂತೀ ಮೂರು ಮೀರಿ ಬೇರೊಂದರಲ್ಲಿ ನಿಂದು ತ್ಯಾಗಾಂಗ ಭೋಗಾಂಗ ಯೋಗಾಂಗ ತ್ರಿವಿಧಲೇಪವಾಗಿ ನಿಂದುದು ನಿಜಗುರುಸ್ಥಲ. ಆ ಗುರುವಿನ ಕೈಯ ಅನುಜ್ಞೆ ಪರಂಜ್ಯೋತಿ ಪ್ರಕಾಶ. ಅದು ನಿರವಯತತ್ವ, ಸದಾಶಿವಮೂರ್ತಿಲಿಂಗವು ತಾನೇ.
--------------
ಅರಿವಿನ ಮಾರಿತಂದೆ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಕ್ಕೆ ಅಂಗತ್ರಯಂಗಳಾವಾವೆಂದಡೆ : ಸುಷುಪ್ತಾವಸ್ಥೆಯೇ ಯೋಗಾಂಗ ಸ್ವಪ್ನಾವಸ್ಥೆಯೇ ಭೋಗಾಂಗ ಜಾಗ್ರಾವಸ್ಥೆಯೇ ತ್ಯಾಗಾಂಗ ನೋಡಾ. ಇದಕ್ಕೆ ಈಶ್ವರೋýವಾಚ : ``ಸುಷುಪ್ಯವಸ್ಥಾ ಯೋಗಾಂಗಂ ಸ್ವಪ್ನಾವಸ್ಥೇನಾಭಿರು | ಜಾಗ್ರದಿತ್ಯುದಿತಾವಸ್ಥಾ ತ್ಯಾಗಾಂಗಮಿತಿ ಲಕ್ಷ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಕಾರವೇ ಪೃಥ್ವಿ:ಮಃಕಾರವೇ ಅಪ್ಪು, ಶಿಕಾರವೇ ಅಗ್ನಿ, ವಾಕಾರವೇ ವಾಯು, ಯಕಾರವೇ ಆಕಾಶ, ಓಂಕಾರವೇ ಆತ್ಮಸ್ವರೂಪು ನೋಡಾ. ಮತ್ತೆ ನಕಾರವೇ ಬ್ರಹ್ಮ, ಮಃಕಾರವೇ ವಿಷ್ಣು, ಶಿಕಾರವೇ ರುದ್ರ, ವಾಕಾರವೇ ಈಶ್ವರ, ಯಕಾರವೇ ಸದಾಶಿವ, ಓಂಕಾರವೇ ಮಹಾತ್ಮನು ನೋಡಾ. ಮತ್ತೆ ಅಂತ್ರರ್ಯಾಮಿಯೇ ನಕಾರ, ಚೈತನ್ಯ ಮಃಕಾರ, ಭಾವನೇ ಶಿಕಾರ, ಕರ್ತಾರನೇ ವಾಕಾರ, ಕ್ಷೇತ್ರಜ್ಞನೇ ಯಕಾರ, ಶಿವನೆ ಓಂಕಾರ ನೋಡ. ಮತ್ತೆ ಕರ್ಮಾಂಗ ಸ್ವರೂಪನಪ್ಪ ಭಕ್ತನೇ ನಕಾರ. ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೇ ಮಃಕಾರ. ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ. ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಾಕಾರ. ಭೂತಾಂಗ ಸ್ವರೂಪನಪ್ಪ ಶರಣನೆ, ಯಕಾರ. ಶಿವಾಂಗ ಸ್ವರೂಪನಪ್ಪ ಐಕ್ಯನೇ ಓಂಕಾರ ನೋಡಾ. ಮತ್ತೆ ನಕಾರವೇ ಸದ್ಭಕ್ತಿ, ಮಃಕಾರವೇ ನೈಷಿ*ಕಾಭಕ್ತಿ, ಶಿಕಾರವೇ ಅವಧಾನಭಕ್ತಿ, ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡಾ. ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡ. ವಾಕಾರವೇ ಈಶ್ವರತತ್ವ, ಯಕಾರವೇ ಸದಾಶಿವತತ್ವ, ಓಂಕಾರವೇ ಪರತತ್ವ ನೋಡಾ. ಮತ್ತೆ ನಕಾರವೇ ಸುಚಿತ್ತ ಹಸ್ತ, ಮಃಕಾರವೇ ಸುಬುದ್ಧಿ ಹಸ್ತ, ಶಿಕಾರವೇ ನಿರಹಂಕಾರ ಹಸ್ತ, ವಾಕಾರವೇ ಸುಮನ ಹಸ್ತ, ಯಕಾರವೇ ಸುಜ್ಞಾನ ಹಸ್ತ, ಓಂಕಾರವೇ ಸದ್ಭಾವ ಹಸ್ತ, ಇಂತಿವು ಅಂಗಷಡಕ್ಷರ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುಗುಣವಳಿದಲ್ಲಿ ತ್ಯಾಗಾಂಗ, ಲಿಂಗದೊಡನೆ ಸಕಲಭೋಗಂಗಳ ಭೋಗಿಸುವಲ್ಲಿ ಭೋಗಾಂಗ, ನಿಜದಲ್ಲಿ ಬೆರಸಿದಲ್ಲಿ ಯೋಗಾಂಗ. ಇಂತೀ ತ್ರಿವಿಧದಲ್ಲಿಯೆ ಶಿವಯೋಗಾಂಗ. ಇದಲ್ಲದನ್ಯಯೋಗಂಗಳೆಲ್ಲಾ ವಿಯೋಗಂಗಳಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತನು ಈ ಆರು ಯೋಗಾಂಗವು ಆದಿಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಗಂಧಂ ಚ ರಸರೂಪಂ ಚ ಸ್ಪರ್ಶನಂ ಶಬ್ದಮೇವ ಹಿ | ಕರ್ತಾರಂ ಚೇತಿ ಯೋಗಾಂಗಂ ಆದಿಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಲೋಕಾಧಿ ಲೋಕಂಗಳೇನುಯೇನೂ ಇಲ್ಲದಂದು `ಏಕಮೇವಾದ್ವಿತೀಯಂ ಪರಬ್ರಹ್ಮ' ತಾನೊಂದೆ ನೋಡಾ. ಅದು ತನ್ನನು ನೆನೆಯದೆ, ಇದಿರನು ನೆನೆಯದೆ ನೆನಹು ನಿಷ್ಪತ್ತಿಯಾಗಿದ್ದಿತು ನೋಡ. ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ ಸಾವಯವಾಗಿ ಚಿತ್ತೆನಿಸಿಕೊಂಡಿತ್ತು. ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ ಎಂಬ ಐದಂಗವನಂಗೀಕರಿಸಿ, ನಿಃಕಲ ಶಿವತತ್ವವೆನಿಸಿತ್ತು ನೋಡ. ಆ ನಿಃಕಲ ಶಿವತತ್ವ ತಾನೊಂದೆ, ತನ್ನ ಶಕ್ತಿಯ ಚಲನೆಮಾತ್ರದಿಂದ ಒಂದೆರಡಾಯಿತ್ತು ನೋಡ. ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ. ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು, ವರ್ತಿಸುತ್ತಿಹುದು ನೋಡ. ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು. ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು, ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು. ಶಕ್ತಿಯೆ ನಿವೃತ್ತಿಯೆನಿಸಿತ್ತು. ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ. ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು. ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು. ಅದು ಹೇಂಗೆಂದಡೆ; ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಮೂರು ತೆರನಾಯಿತ್ತು. ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು ಎರಡು ತೆರನಾಯಿತ್ತು. ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು ಎರಡು ತೆರನಾಯಿತ್ತು. ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವನು ಆರು ತೆರನಾದನು. ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ, ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ, ಶಾಂತಿಯೆಂಬ ಕಲಾಪರಿಯಾಯವನುಳ್ಳ ಆದಿಶಕ್ತಿ, ವಿದ್ಯಾಕಲಾಪರಿಯಾಯವನುಳ್ಳ ಇಚ್ಛಾಶಕ್ತಿ, ಪ್ರತಿಷಾ*ಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ. ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ, ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ, ಷಟ್‍ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು. ಇದು ಲಿಂಗಷಟ್‍ಸ್ಥಲ. ಇನ್ನು ಒಂದು ಅಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ: ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು ಪ್ರಕಾರವಾಯಿತ್ತು. ಈ ತ್ರಯಾಂಗ ಒಂದೊಂದು ಎರಡೆರಡಾಗಿ, ಆರು ತೆರನಾಯಿತ್ತು. ಅದು ಹೇಂಗೆಂದೆಡೆ: ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು. ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು ಎರಡು ತೆರನಾಯಿತ್ತು. ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು. ಸಮರಸಭಕ್ತಿ, ಆನಂದಭಕ್ತಿ, ಅನುಭಾವಭಕ್ತಿ, ಅವಧಾನಭಕ್ತಿ, ನೈಷ್ಟಿಕಾಭಕ್ತಿ, ಸದ್ಭಕ್ತಿ ಎಂದು ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ, ಷಟ್‍ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು. ಇದು ಅಂಗಷಟ್‍ಸ್ಥಲ. ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ- ಆ ನಿವೃತ್ತಿಯ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು. ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ. ಅಂಗವೆಂದಡೆ ಶರಣ:ಲಿಂಗವೆಂದಡೆ ಶಿವ. ಆ ಶರಣಂಗೆ ಆ ಲಿಂಗವು ಆವಾಗಲೂ ಪ್ರಾಣವು ಆ ಲಿಂಗಕ್ಕೆ ಆ ಶರಣನಾವಾಗಲೂ ಅಂಗವು. ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗಲ್ಲದೆ, ಭಿನ್ನವಿಲ್ಲ. ಇದು ಕಾರಣ, ಅನಾದಿಯಿಂದವು ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ, ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ, ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನು ಕಾರಣವೆಂದಡೆ; ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ. ಈ ಷಟ್‍ಸ್ಥಲಮಾರ್ಗವು ದ್ವೆ ೈತಾದ್ವೆ ೈತದ ಪರಿವರ್ತನೆಯಲ್ಲ. ಅದೇನು ಕಾರಣವೆಂದಡೆ; ಇದು ಶಿವಾದ್ವೆ ೈತಮಾರ್ಗವಾದ ಕಾರಣ. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ಬೊಮ್ಮ, ಪರಬೊಮ್ಮನೆಂದು ಬೇರುಂಟೆ ತಾನಲ್ಲದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ರಜೋಗುಣದಷ್ಟವಿಧದಂಗವಳಿದುಳಿದುದೇ ಶಿವಾಂಗ. ಸತ್ವಗುಣದ ದಶವಿಧದಂಗವಳಿದುಳಿದುದೇ ಶಿವಾಂಗ. ತಮೋಗುಣದಷ್ಟವಿಧದಂಗವಳಿದುಳಿದುದೇ ಶಿವಾಂಗ. ಮತ್ತೆ ಬಹಿರಂಗದ ಅಷ್ಟಮದವಳಿದುಳಿದುದೇ ತ್ಯಾಗಾಂಗ. ಅಂತರಂಗದಷ್ಟಮದವಳಿದುಳಿದುದೇ ಭೋಗಾಂಗ. ಆತ್ಮನಷ್ಟಮದವಳಿದುಳಿದುದೇ ಯೋಗಾಂಗ. ಇದು ಕಾರಣ ಈ ಅಂಗಸಂಗಸನ್ನಿಹಿತ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರಭುಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
-->