ವಚನಕಾರ:
ಅಗ್ಘವಣಿ ಹೊನ್ನಯ್ಯ
ಅಂಕಿತ ನಾಮ:
ಹುಲಿಗೆರೆಯ ವರದ ಸೋಮನಾಥ
ಕಾಲ:
1160
ದೊರಕಿರುವ ವಚನಗಳು:
4 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ),ಬೆಳಗಾವಿ
ಪರಿಚಯ:
ಕಾಲ ಸು. 1160. ಊರು: ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ). ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. 4 ವಚನಗಳು ದೊರೆತಿವೆ. ಮರಡಿಪುರ (1180) ಶಾಸನದಲ್ಲಿ ಈತನ ಉಲ್ಲೇಖವಿದೆ. ಅಬ್ಬಲೂರಿನಲ್ಲಿ ನಡೆದ ಪವಾಡ ಪ್ರಸಂಗದಲ್ಲಿ ಏಕಾಂತ ರಾಮಯ್ಯನ ತಲೆಯನ್ನು ಹರಿವಾಣದಲ್ಲಿಟ್ಟು ಮೆರೆಸಿದ ಅನ್ನುವ ಐತಿಹ್ಯವಿದೆ. ಶಿವಭಕ್ತಿ, ಉಗ್ರವಾದ ಏಕದೇವತಾ ನಿಷ್ಠೆ ಇವನ ವಚನಗಳಲ್ಲಿ ವ್ಯಕ್ತವಾಗಿವೆ.