ಅಥವಾ

ಒಟ್ಟು 21 ಕಡೆಗಳಲ್ಲಿ , 13 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗ ಜಂಗಮದ ಇರವನರಿವಲ್ಲಿ, ತನ್ನ ಶ್ರದ್ಧೆಯೊ ಅವರ ಇರವೊ ಎಂಬುದನರಿಯಬೇಕು. ಗುರುವಿನಲ್ಲಿ ಗುಣವನರಸಲಿಲ್ಲಾ ಎಂಬರು; ಲಿಂಗದಲ್ಲಿ ಲಕ್ಷಣವನರಸಲಿಲ್ಲಾ ಎಂಬರು; ಜಂಗಮದಲ್ಲಿ ಜಾತಿಸೂತಕವನರಸಲಿಲ್ಲಾ ಎಂಬರು. ಇದು ಎಲ್ಲರ ಬಳಕೆಯ ಮಾತು. ಗುರುವಿನಲ್ಲಿ ಗುಣವಿಲ್ಲದಿರ್ದಡೆ ಶಿಷ್ಯನ ಕೃತಾರ್ಥನ ಮಾಡುವ ಪರಿಯಿನ್ನೆಂತೊ? ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ಪಂಚಸೂತ್ರ ಪ್ರವರ್ತನ ವರ್ತುಳ ಗೋಮುಖ ಗೋಳಕಾಕಾರ ಇಷ್ಟಾರ್ಥ ಭಕ್ತರಿಗೆ ಮನೋಹರವಹ ಪರಿಯಿನ್ನೆಂತೊ? ಜಂಗಮಕ್ಕೆ ಜಾತಿಯಿಲ್ಲದಿರ್ದಡೆ, ಉತ್ತಮ ಕನಿಷ* ಮಧ್ಯಮ ಮುಖದಲ್ಲಿ ವೇದಾಂತಿ, ಭುಜದಲ್ಲಿ ಕ್ಷತ್ರಿಯ, ಉದರದಲ್ಲಿ ಹರದಿಗ, ಜಂಘೆಯಲ್ಲಿ ಹಲಾಯುಧ ಈ ಅಂಗದಲ್ಲಿ ವಿಶೇಷವ ಕಂಡು ಜಾತಿಯ ಹಿಂಗುವ ಪರಿಯಿನ್ನೆಂತೊ? ನುಡಿಯಬಾರದು, ದರಿಸಿನಕ್ಕಂಜಿ ಸುಮ್ಮನಿರಬಾರದು. ಜ್ಞಾನಕ್ಕಂಜಿ ಬಿದಿರ ಹೋಟೆಯಲ್ಲಿ ಹರಿದ ಉರಿಯಂತೆ ಬೇವುತ್ತಿದ್ದೇನೆ. ಈ ಬೇಗೆಯ ಬಿಡಿಸು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಇನ್ನು ಲಿಂಗೋತ್ಪತ್ಯವದೆಂತೆಂದಡೆ : ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ. ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು. ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ. ಈ ಆರೂ ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ ಅಖಂಡಲಿಂಗವಾಯಿತ್ತು. ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ. ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ || ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ || ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ || ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ || ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ | ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ || ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ | ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ || ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ | ನಾದಬಿಂದು ಯುಕ್ತರೂಪಂ ಜಗತ್ಸ ೃಷ್ಟ್ಯರ್ಥಕಾರಣಂ || ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ | ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ || ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ | ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ || ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ | ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ || ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ | ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತಿ :ಶ್ರೀ ಮಹಾದೇವ ಉವಾಚ- ``ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ | ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ || ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸತ್ಯಸ್ವರೂಪಮಾದ ಬಸವೇಶ್ವರನೇ ಭಕ್ತನು, ಜ್ಞಾನಸ್ವರೂಪಮಾದ ಚನ್ನಬಸವೇಶ್ವರನೇ ಗುರುವು, ಆನಂದಸ್ವರೂಪಮಾದ ಅಲ್ಲಮಪ್ರಭುವೇ ಜಂಗಮ. ಇಂತಪ್ಪ ಗುರು ಜಂಗಮ ಭಕ್ತರೆಂಬ ಮಹಾನದಿಗಳು ತ್ರಿಪಥಗಾಮಿನಿಗಳಾಗಿ, ಮಚ್ಛರೀರವೆಂಬ ಕಾಶೀಕ್ಷೇತ್ರದಲ್ಲಿ ಪರಿದು ಪವಿತ್ರಮಂ ಮಾಡಿ, ನನ್ನ ಹೃದಯವೆಂಬ ಮಣಿಕರ್ಣಿಕಾಸ್ಥಾನದೊಳ್ಮೂರೊಂದಾಗಿ ಕುಡಲು, ಸತ್ಯವೇ ಕಂಠ, ಜ್ಞಾನವೇ ಗೋಮುಖ, ಆನಂದವೇ ಗೋಳಾಕಾರಮಾಗಿರ್ಪ ಮಹಾಲಿಂಗವೆಂಬ ತ್ರಿವೇಣಿಸಂಗಮದಲ್ಲಿ ನಾಂ ಮುಳುಗಿ, ನಿರ್ವಾಣದಲ್ಲಿ ಮುನ್ನಿನಂತಿದ್ದೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪದ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೆ ಶಿವನು, ಉಕಾರವೆ ಶಕ್ತಿ , ಮಕಾರವೆ ಪರವು. ಅಕಾರವೆ ನಾದ, ಉಕಾರವೆ ಬಿಂದು, ಮಕಾರವೆ ಕಲೆ. ಈ ಆರು ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ ಬಿಂದು ಕಲೆ ಯುಕ್ತವಾಗಿ ಅಖಂಡಲಿಂಗವಾಯಿತ್ತು . ಅದಕ್ಕೆ ಕರಚರಣ ಅವಯವಂಗಳಿಲ್ಲ ; ಅಖಂಡಸ್ವರೂಪು. ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರಂ ತಾರಕಾರೂಪಂ ಅಕಾರಂ ಸೋýಜಾಯತ | ಓಂಕಾರ ಕುಂಡಲಾಕಾರೇ ಉಕಾರಂ ಚಾತ್ರ ಜಾಯತೇ || ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ | ಇತಿ ತ್ರ್ಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ || ಅಕಾರೇಚ ಉಕಾರೇಚ ಮಕಾರೇಚಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗ ಸಮುದ್ಭವಂ | ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಅಕಾರೋಕಾರ ಸಂಯೋಗಾತ್ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತಲಿಂಗಮಾಕಲ್ಯ ಗೋಳಕಾಕಾರಸಂಜ್ಞಕಃ || ನಾದೋ ಲಿಂಗಮಿತಿ ಜ್ಞೇಯಂ ಬಿಂದುಪೀಠಮುದಾಹೃತಂ | ನಾದಬಿಂದುಯುತಂ ರೂಪಂ ಜಗಸ್ಸೃಷ್ಟ್ಯರ್ಥಕಾರಣಂ || ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಂ ಶಂಭುರಿತಿಜ್ಞೇಯಂ ಪೀಠಂ ಶಕ್ತಿರುದಾಹೃತಂ | ಶಿವಶಕ್ತಿಸಮಾಯೋಗಂ ಸೃಷ್ಟಿಸ್ಥಿತಿ ಲಯಾವಹಂ || ಲಿಂಗೇನ ಜಾಯತೇ ತತ್ರ ಜಗತ್‍ಸ್ಥಾವರ ಜಂಗಮಂ | ತಸ್ಮಾಲ್ಲಿಂಗಮಶೇಷೇಣ ಲಿಂಗರೂಪಮುದಾಹೃತಂ || ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಸುರೇಂದ್ರಾಣಾಂ ಲೀಯತೇ ಸರ್ವದೇವತಾ ಃ || ಅಸಂಖ್ಯಾತ ದೇವಮುನಯೋ ಗಮ್ಯತೇ ಸರ್ವದೇವತಾಃ | ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವ ಲಿಂಗಮಿತ್ಯಾಹುಃ ಲಿಂಗತತ್ವ ಪರಾಯಣಾಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತೇ : ``ಆದಿಯೋಂಕಾರಪೀಠಂಚ ಅಕಾರಂ ಕಂಠರುಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾಳಂ ಬಿಂದು ಮಹಾತೇಜ ನಾದಮಖಂಡಲಿಂಗಯೋಃ | ಆದಿಮಧ್ಯಾಂತರಹಿತಂ ಅಪ್ರಮೇಯಮನಾಮಯಂ || ಅಸಂಖ್ಯ ಸೂರ್ಯಚಂದ್ರಾಗ್ನಿಃ ಅಸಂಖ್ಯಾತತಟಿತ್ಪ್ರಭಂ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಂ ಅಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು ಶುದ್ಧಸಾವಧಾನದಿಂದೆ ಧರಿಸಿಕೊಂಡು, ಆ ಲಿಂಗವೆ ಪತಿ ತಾನೆ ಸತಿ ಎಂಬ ಭಾವದಿಂದೆ ಆಚರಿಸುವ ಕಾಲದಲ್ಲಿ ಆ ಲಿಂಗವು ಮೋಸದಿಂದೋಸರಿಸಿ ಹೋದಡೆ ಅರಸಿ ನೋಡಿಕೊಂಡು, ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರವ ತಿಳಿದು ಮುನ್ನಿನಂತೆ ಧರಿಸಿಕೊಂಬುವುದು. ಮತ್ತಾ ಲಿಂಗವು ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕ ಎಂಬ ಷಟ್‍ಸ್ಥಾನಂಗಳಲ್ಲಿ ಭಿನ್ನವಾದಡೆಯೂ ಕಣ್ಣಿಗೆ ಕಾಣಿಸಿಕೊಳ್ಳದೆ ಹೋದಡೆಯೂ ಲಿಂಗಕ್ಕೆ ತನ್ನ ಪ್ರಾಣವನು ತ್ಯಾಗಮಾಡಬೇಕಲ್ಲದೆ, ಅಲ್ಲಿ ಹಿಂದು ಮುಂದು ನೋಡಲಾಗದು. ಇದಕ್ಕೆ ಶಿವನ ವಾಕ್ಯವೆ ಸಾಕ್ಷಿ : ``ಗುರುಣಾ ದತ್ತಲಿಂಗಂ ತು ಸಾವಧಾನೇನ ಧಾರಯೇತ್ | ಪ್ರಮಾದಾತ್ಪತಿತೇ ಲಿಂಗೇ ಪ್ರಾಣಾನಪಿ ಪರಿತ್ಯಜೇತ್ || ವೃತ್ತನಾಲಸಮಂ ಪೀಠಂ ಗೋಲಕಂ ಮಧ್ಯಗೋಮುಖಂ | ಭಿನ್ನಂ ಷಡ್ವಿಧಸ್ಥಾನೇನ ಪ್ರಾಣಾಂ ಸ್ತ್ಯಕ್ತ್ವಾ ಶಿವಂ ವ್ರಜೇತ್ ||'' -ಸಿದ್ಧಾಂತ ಶಿಖಾಮಣಿ ಇಂತಪ್ಪ ಲಿಂಗೈಕ್ಯವಾದ ಶರಣರ ನೀನೆಂದೇ ಕಾಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->