ಅಥವಾ

ಒಟ್ಟು 166 ಕಡೆಗಳಲ್ಲಿ , 1 ವಚನಕಾರರು , 166 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು ಪರಮಗುರುಮುಖದಿಂದೆ ಸಾದ್ಥಿಸಿ, ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ, ಕಳೆವ ಕರಡವಿಯೊಳೆಸೆವುತ, ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ, ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ ಹಿಡಿತ ಬಿಡಿತಗಳರಿದು, ಜರೆದು ನೂಂಕುತ ಹಿಡಿದುಕೊಂಬುತ ಶರಣು ಶರಣೆಂದು ಬೆರೆದು ಬೆರಗಾಗಿರ್ಪ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಚಿತ್ತ ಸುಬುದ್ಧಿಯೆಂಬ ಹಸ್ತವನು ಸ್ಥೂಲತನುಸನ್ನಿಹಿತವಾಗಿ ಸತ್ಕಳೆಯೊಳೊಪ್ಪುತಿರ್ದನು ಕಾಣಾ. ನಿರಹಂಕಾರ ಸುಮನವೆಂಬ ಹಸ್ತವನು ಸೂಕ್ಷ್ಮತನುಸನ್ನಿಹಿತವಾಗಿ ಚಿತ್ಕಳೆಯೊಳೊಪ್ಪುತಿರ್ದನು ಕಾಣಾ. ಸುಜ್ಞಾನ ಸದ್ಭಾವವೆಂಬ ಹಸ್ತವನು ಕಾರಣತನುಸನ್ನಿಹಿತವಾಗಿ ಆನಂದಕಳೆಯೊಳೊಪ್ಪುತಿರ್ದನು ಕಾಣಾ. ತನುತ್ರಯಸನ್ನಿಹಿತವಾದ ಷಡ್ವಿಧಹಸ್ತದೊಬ್ಬುಳಿಯೊಡವೆರೆದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಘನಪರಿಣಾಮಿಯಾಗಿ ಒಪ್ಪುತಿರ್ದನು ಕಾಣಾ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲುಕಾಣಿಸಿಕೊಳ್ಳದೆ ನಡೆದು ನಿಂದನಯ್ಯಾ. ಕೈಯಕಾಣಿಸಿಕೊಳ್ಳದೆ ಮುಟ್ಟಿ ನಿಂದನಯ್ಯಾ. ಕಣ್ಣಕಾಣಿಸಿಕೊಳ್ಳದೆ ನೋಡಿ ನಿಂದನಯ್ಯಾ. ಎಡಬಲದ ಗುಂಜುಗಂಜಳಕ್ಕಡಿಯಿಡದೆ ಮಂಜುಳಮಯ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀಲಲೋಚನೆಯಮ್ಮನವರ ಮನೆಯಲ್ಲಿ ನಿರ್ಮಲಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ನಾಗಲಾಂಬಿಕೆಯವರ ಮನೆಯಲ್ಲಿ ಚಿತ್ಕಲಾಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ಅಕ್ಕಮಹಾದೇವಿಯವರ ಮನೆಯಲ್ಲಿ ನಿರಂಜನಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ಮುಕ್ತಾಯಕ್ಕಳ ಮನೆಯಲ್ಲಿ ನಿರವಯ ಸಂವಿತ್ಪ್ರಭಾನಂದಪ್ರಸಾದವ ಕಂಡು ನಿತ್ಯ ಸೇವಿಸಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಣ್ಣಿಲ್ಲದ ಗುರುವಿನ ಕೈಯಿಂದೆ ಮಣ್ಣಿಲ್ಲದ ಮಗನಾಗಿ ತಾನೊಂದು ಕಣ್ಣ ಕೊಂಡು ಕಾವ್ಯನಾದ ಬಳಿಕ ಬಣ್ಣವಿಲ್ಲದ ಧಾನ್ಯವ ತಂದು ಚೆನ್ನಾಗಿ ಪಾಕವಮಾಡಿ ಮತ್ತಾರ ಕಾಣಗೊಡದೆ, ಸತ್ಯ ಭೋಜ್ಯಗಟ್ಟಿ ನಿತ್ಯವಾಗಿ ಕೊಟ್ಟು ಕೊಂಡು ಸುಖಿಸಿದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಥ್ಯಪ್ರಸಾದಿಯೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿತ್ಯಾನಂದ ಸುಖಮುಖ ಶರಣರು ನುಡಿವರು- ಕಾಯಕಳೆ ಸಂಗಮನೆಂದರೆ ಗುರುವಿಹೀನನೆಂದು. ಮನಕಳೆ ಸಂಗಮನೆಂದರೆ ಲಿಂಗವಿಹೀನನೆಂದು. ಪ್ರಾಣಕಳೆ ಸಂಗಮನೆಂದರೆ ಜಂಗಮವಿಹೀನನೆಂದು. ಭಾವಕಳೆ ಸಂಗಮನೆಂದರೆ ಪ್ರಸಾದವಿಹೀನನೆಂದು, ಅರುಹಿನ ಕಳೆ ಸಂಗಮನೆಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಾದೋದಕ ಸಂಬಂದ್ಥಿ ಭಕ್ತನೆಂದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚ ಮತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು ನಿಮ್ಮಾದಿ ಶಿಶುವಾದಕಾರಣ. ನಚ್ಚಿ ಮಾಡಿದಡಿಗೆಯು ಅಚ್ಚಳಿಯದಿದ್ದಿತ್ತು ಆಡುತ ಬನ್ನಿ ಮೂವರೊಂದಾಗಿ. ಬೇಡಿಕೊಂಬುವನಲ್ಲ, ನೀಡಿ ನೂಕಿ ನಿಲ್ಲುವೆ ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಮಸವ ತರಿದು ಕಲ್ಪನೆಯ ಕಳೆದು, ಸಂಶಯಗುಣವಳಿದು, ಭ್ರಾಂತಿವಿರಹಿತವಾಗಿ, ಕಾಯಮನಪ್ರಾಣಭಾವಕ್ಕೆ ಪ್ರಭೆಯನೂಡಿ, ಮತ್ಸ್ಯ ಕೂರ್ಮ ವಿಹಂಗ ಗತಿಯರಿದು ಕಂಡು ಮರೆದು ಪರಿಣಾಮಮುಖಿ ತಾನೆ ಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಭಾವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಕರ್ತಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ? ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ, ಧನಮದದಲ್ಲಿ ನಿಷ್ಠೆಯಿಲ್ಲ, ರೂಪುಮದದಲ್ಲಿ ನಿಷ್ಠೆಯಿಲ್ಲ, ಯೌವನಮದದಲ್ಲಿ ನಿಷ್ಠೆಯಿಲ್ಲ, ವಿದ್ಯಾಮದದಲ್ಲಿ ನಿಷ್ಠೆಯಿಲ್ಲ, ರಾಜಮದದಲ್ಲಿ ನಿಷ್ಠೆಯಿಲ್ಲ, ತಪಮದದಲ್ಲಿ ನಿಷ್ಠೆಯಿಲ್ಲ. ಮತ್ತೆ ಹಿಡಿತ ಬಡಿತಗಳಲ್ಲಿ ನಿಷ್ಠೆಯಿಲ್ಲದೆ ಪಡೆದು ಹಿಡಿದು ಬಂದ ನಿಷ್ಠೆ ನಿಜಮಹೇಶ್ವರನೆಂದರೆ ಅಪಹಾಸ್ಯ ಕುರುಹಿನೊಳಗೆ ಇಂತಲ್ಲ ಶರಣ ಅಷ್ಟಮದ ನಿಷ್ಠೆ ನಿಜೇಷ್ಠಲಿಂಗಸನ್ನಿಹಿತ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಾರರಲ್ಲಿ ಬೆಳಗ ನಿಲ್ಲಿಸಿ, ಪ್ರಾಣಾಂಗವಾರರಲ್ಲಿ ಬೆಳಗ ನಿಲ್ಲಿಸಿ, ಎರಡೊಂದು ಪಾದವಿಡಿದು ಸಕಲರು ಕೂಡಿ ಬಂದು ಶರಣೆಂದು ಮರೆದರೆ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಅದೇ ಪ್ರಾಣಲಿಂಗಸಂಬಂಧವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಾದಿಸಂಸಿದ್ಧ ನಿರಂಜನಲಿಂಗದಿಂದೊಗೆದವ ನಾನಾದ ಕಾರಣ, ಜ್ಞಾನೋದಯವಾಗಿ ಮಾಯಾದಿ ಸಕಲಕರ್ಮಂಗಳ ವಿಸರ್ಜಸಿದೆನು. ಆದಿ ಮಹಾಲಿಂಗದಂಗದಿಂದುಯವಾದವ ನಾನಾದ ಕಾರಣ ಶ್ರೀ ಗುರುಕಾರುಣ್ಯವಾಗಿ ಲಿಂಗಾಂಗ ಷಟ್‍ಸ್ಥಲಜ್ಞಾನಿಯಾದೆನು. ಆದಿ ಮಧ್ಯ ಅವಸಾನದಿಂದಲತ್ತತ್ತಲಾದ ನಿರವಯಾನಂದಪರಬ್ರಹ್ಮಾಂಶಿಕ ನಾನಾದ ಕಾರಣ ತ್ರಿವಿಧ ಲಿಂಗಾನುಭಾವವೆಂಟಂಗ, ಪಂಚಪ್ರಾಣಾದಿ ಸಕಲ-ನಿಃಕಲ ಸನುಮತಾನಂದ ಪರಬ್ರಹ್ಮವೆಯಾಗಿರ್ದೆನು ನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಸೂತ್ರಚೈತನ್ಯಕ್ಕಿದ್ದನೊಬ್ಬ, ಮನಸೂತ್ರಚೈತನ್ಯಕ್ಕಿದ್ದನೊಬ್ಬ, ಆತ್ಮಸೂತ್ರಚೈತನ್ಯಕ್ಕಿದ್ದನೊಬ್ಬ, ಈ ಮೂವರ ಮುಂಭಾರವ ಹೊತ್ತು ನಡೆಯದೆ, ಮರೆದು ಬಳಸಿದರ್ಥದ ಬಡ್ಡಿಯನರಿದು ಕೊಟ್ಟು ಮೂಲದ್ರವ್ಯದಲ್ಲಡಗಿ ಅಮರಿಸಬಲ್ಲರೆ ಆದಿಯ ಭಕ್ತನಹುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರವಿಲ್ಲದಂಗ, ವಿಚಾರವಿಲ್ಲದ ಮನ, ಸಂಬಂಧವರಿಯದ ಪ್ರಾಣ, ಪರಿಣಾಮವರಿಯದ ಭಾವ, ಈ ಚತುರ್ವಿಧದಲ್ಲಿರ್ದ ಚಾಪಲ್ಯರು ಸಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಸ್ಥಲಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದವಿರಳಾನಂದ ಜ್ಯೋತಿರ್ಮಯ ಭಸಿತವನು ಪಾದಾದಿ ಮಸ್ತಕಕೆ ಸರ್ವಾಂಗದಲಿ ಧರಿಸಿ ಆದಿ ಮಧ್ಯ ಕಡೆಯೆಂಬ ಕರ್ಕಸವ ನೂಂಕಿ, ಕರ್ತು ನಿರಂಜನ ಚನ್ನಬಸವಲಿಂಗದಲ್ಲಿ ಸುಖಿಯಾದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->