ಅಥವಾ

ಒಟ್ಟು 61 ಕಡೆಗಳಲ್ಲಿ , 14 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮ ಕಾಡಿತು, ಕ್ರೋಧ ಕೊಂದಿತು, ಆಮಿಷವೆನ್ನನೆಳೆವುಕ್ಕಿದೆ. ಕರುಣ ಮಾಡಾ ಹರಹರ ಮಹಾದೇವಾ, ಕರುಣ ಮಾಡಾ ಶಿವಶಿವ ಮಹಾದೇವಾ. ಕರುಣ ಮಾಡಾ ದೆಸೆಗೆಟ್ಟ ಪಶುವಿನೊಮ್ಮೆ, ಕರುಣ ಮಾಡಾ ವಶವಲ್ಲದ ಶಿಶುವಿಂಗೊಮ್ಮೆ. ಕರುಣ ಮಾಡಾ ಅನ್ಯವನ್ನು ನಾನರಿಯೆ. ನಿಮ್ಮ ಪಾದವನುರೆ ಮಚ್ಚಿದೆನು, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ ತಂದೆ.
--------------
ಸಿದ್ಧರಾಮೇಶ್ವರ
ಅಂಬರದೇಶದ ಕುಂಭ ಕೋಣೆಯೊಳಗೆ ಜಂಬುಲಿಂಗಪೂಜೆಯ ಸಂಭ್ರಮವ ನೋಡಾ ! ಅಂಬುಜಮುಖಿಯರು ಆರತಿಯನೆತ್ತಿ ಶಂಭು ಶಿವಶಿವ ಹರಹರ ಎನುತಿರ್ಪರು ನೋಡಾ ! ತುಂಬಿದ ಹುಣ್ಣಿಮೆಯ ಬೆಳದಿಂಗಳು ಒಂಬತ್ತು ಬಾಗಿಲಲ್ಲಿ ತುಂಬಿ ಹೊರಸೂಸುತಿರ್ಪುದು ನೋಡಾ ! ಈ ಸಂಭ್ರಮವನೇನ ಹೇಳುವೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅಯ್ಯಾ, ತರ್ಕ ವ್ಯಾಕರಣಾಗಮ ಶಾಸತ್ತ್ರ ಪುರಾಣ ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು. ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು. ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು. ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು, ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ. ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ :ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ , ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಆಸೆಯ ಪಾಶದಿಂದ ತೊಳಲಿತಯ್ಯ ಎನ್ನ ಕಾಯವು. ಆಸೆ-ಆಮಿಷದಿಂದ ಹೊದಕುಳಿಗೊಂಡಿತಯ್ಯ ಎನ್ನ ಮನವು. ಆಸೆಯೆಂಬ ಮರವೆಯಲ್ಲಿ ಮನೆಮಾಡಿತಯ್ಯ ಎನ್ನ ಪ್ರಾಣವು. ಆಸೆಯೆಂಬ ಹೊಡೆಗಿಚ್ಚಿನಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಭಾವವು. ಇನ್ನೆನಗೆ ಗತಿಯ ಪಥವ ತೋರಿಸಿ ರಕ್ಷಿಸಯ್ಯ, ಭವಪಾಶರಹಿತ ಪರಬ್ರಹ್ಮಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಶ್ರೀಗುರುಲಿಂಗಜಂಗಮವೆ, ಶ್ರೀಗುರು ಲಿಂಗಜಂಗಮವೆ, ಶ್ರೀಗುರು ಲಿಂಗಜಂಗಮವೆ. ಕಾಯಯ್ಯ ಕಾಯಯ್ಯ ಕರುಣಾ[ಣುವೆ]. ಎನ್ನ ಅಜ್ಞಾನಮಾಯಾಪಾಶವ ಪರಿಹರಿಸಿ ರಕ್ಷಿಸಯ್ಯ ಭವರೋಗ ವೈದ್ಯನೆ, ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮ ಚರಣಕಮಲವ ಮರೆಹೊಕ್ಕೆನಯ್ಯ. ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ತ್ರಿಪುರಸಂಹರ ತ್ರಿಶೂಲಿ ತ್ರಿನಯನ ತ್ರಿಗುಣಕತೀತ ತ್ರಿದೇವರಾತ್ಮಲಿಂಗ ತ್ರಿಮಲವಿದೂರ ತ್ರಿಲಿಂಗೇಶ ತ್ರಿಪ್ರಸಾದ ತ್ರಿಲೋಕೇಶ ತ್ರಿಣೇಯ ತ್ರಿತನು ಆತ್ಮವಿಲೇಪ ತಿಮಿರಹರದ್ಭಾನು ತ್ರ್ಯಕ್ಷರ ಅWಮಘೆರತ್ರನೀಲಕಂಠ ತ್ರಿಯಾಸ್ಯರುದ್ರ ಪರಮಾರ್ಥ ಪರಬ್ರಹ್ಮ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಲಸಂಹರ ಕಾಮವಿದೂರ ಕರಣಾತೀತ ಕರ್ಮಗಿರಿಗೊಜ್ರ ಕಮಲಮಿತ್ರ ಶಶಿಭೂಷ ಕರುಣಕಟಾಕ್ಷ ಕಮಲೋದ್ಭವಶಿರಕರಕಪಾಲ ಕಮಲಪೂಜಿತನಯನ ಪಾದಚರಣದಲಿ ಧರಿಸಿದ ದೇವ ವಿಶ್ವಕ್ಷೇನ ಹೆಣನ ಹೊತ್ತ ದೇವ ವೇದಶಾಸ್ತ್ರಕತೀತದೇವನೆಂದು ಮೊರೆಹೊಕ್ಕೆ. ಎನ್ನಯ ಮೊರೆಯಂ ಕೇಳಿ ಕಾದರೆ ಕಾಯಿ,ಕೊಂದರೆ ಕೊಲ್ಲು, ನಿಮ್ಮ ಧರ್ಮ, ನಿಮ್ಮ ಧರ್ಮ. ನೀನೆ ಹುಟ್ಟಿಸಿ, ನೀನೆ ಕರ್ಮಕಾಯಕೆ ಗುರಿಮಾಡಿ, ನೀನಗಲಿದರೆ ನೊಂದೆ ಬೆಂದೆ. ಬಿಡಬೀಸದಿರು, ಎನ್ನನಿತ್ತ `ಬಾ'ಯೆಂದು ತಲೆದಡಹೊ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಯ ಜಯ ನಿತ್ಯನಿರಂಜನ ಪರಶಿವ, ಜಯ ಜಯ ಅಮೃತಕರ, ಜಯ ಸದಾನಂದ, ಜಯ ಕರುಣಜಲ, ಜಯ ಭಕ್ತರೊಂದ್ಯ, ಜಯ ಜ್ಞಾನಸಿಂಧು, ಜಯ ಕರ್ಮವಿದೂರ, ಜಯ ಚಿನ್ಮಯ ಚಿದ್ರೂಪ, ಜಯ ಜಗದೀಶ ಎನ್ನವಗುಣವ ನೋಡದೆ ರಕ್ಷಿಸು ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ ನೆರೆಹೊರೆಯವರತ್ತ ಸಾರಿ, ಕೆಂಚಕೆಡಿಗರತ್ತ ಸಾರಿ, ಬಿಳಿಯ ಬೆಂಗಡಿಗರತ್ತ ಸಾರಿ, ಕರಿಯಗೊಂದಣಿಗರತ್ತ ಸಾರಿ, ಮುಂದೆ ಹುಣ್ಣಿವೆಗಮ್ಮಯ್ಯನ ಯಾತ್ರೆ ಬೇಕಾದರೆ ಅಮಾವಾಸ್ಯೆಯ ಕಳೆದು ಅಂಗ ಮಡಿಯಾಗಿ ಕಂಗಳ ಮುಂದೆ ಬಂದರೆ ಸಂಗಯ್ಯನ ತೇರು ಸುಖದಿಂದೆ ರಂಗಮಂಟಪಕ್ಕೆ ಸಾಗಿ, ಧರೆಯಾಕಾಶ ತುಂಬಿದ ಪರಿಸೆ ಹರಹರ ಶಿವಶಿವ ಜಯಜಯ ಚಾಂಗು ಭಲೆಯೆಂದು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಓಲ್ಯಾಡುವ ಬನ್ನಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಹರ ಶಿವಶಿವ ಜಯಜಯ ನಮೋ ನಮೋ ತ್ರಾಹಿ ತ್ರಾಹಿ ಕರುಣಾಕರ ಅಭಯಕರ ಸುಧಾಕರ ಚಿದಾಕರ ಮತ್ಪ್ರಾಣನಾಥ ಸರ್ವಾಧಾರ ಸರ್ವಚೈತನ್ಯಮೂರ್ತಿ ಶ್ರೀಗುರುಲಿಂಗಜಂಗಮವೆ, ನಿಮ್ಮ ಘನಪಾದಪೂಜೆಯ ಮಾಡುವುದಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿಯೆಂದು ಕೃಪಾನಂದವ ಬೆಸಗೊಂಡು, ಸಮ್ಮುಖದ ಗರ್ದುಗೆಯಲ್ಲಿ ಮೂರ್ತವಮಾಡಿ, ನಿಜಾನಂದದಿಂದ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮಲಿಂಗಮೂರ್ತಿಯ ಷಟ್ಕøತಿ ನವಕೃತಿಗಳಲ್ಲಿ ಅನಾದಿಜ್ಯೋತಿರ್ಮಯ ಮಹಾಪ್ರಣಮಲಿಂಗಂಗಳ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ಧ್ಯಾನವಿಟ್ಟು, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರಗಳ ಗಣಸಮೂಹವನೊಡಗೂಡಿ, ಘನಮನೋಲ್ಲಾಸದಿಂದ ಸಮಾಪ್ತವ ಮಾಡಿ ನಮಸ್ಕರಿಸಿ, ಇದೆ ನಿಃಕಳಂಕ ಸದ್ರೂಪ ಘನಗುರುಮೂರ್ತಿ ಇಷ್ಟಲಿಂಗಾರ್ಚನ ಎಂದು ಭಾವಭರಿತವಾಗಿ, ಎಲೆಗಳೆದ ವೃಕ್ಷದಂತೆ ಕರಣಂಗಳುಲುವಿಲ್ಲದೆ ನಿಂದ ನಿಜೋತ್ತಮರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ, ಕುಶಬ್ದ, ಹಿಂಸೆಶಬ್ದ, ಹೊಲೆಶಬ್ದ, ಭಾಂಡಿಕಾಶಬ್ದ, ವಾಕರಿಕೆ ಶಬ್ದ, ಗುರುಚರಪರಭಕ್ತಗಣನಿಂದ್ಯದ ನುಡಿ, ಕುಟಿಲ ಕುಹಕ ಶಬ್ದ, ಭಂಡ ಅಪಭ್ರಷ್ಟರ ನುಡಿ, ಸೂಳೆ ದಾಸ ಷಂಡರ ನುಡಿ, ಹೊನ್ನು-ಹೆಣ್ಣು-ಮಣ್ಣು-ಐಶ್ವರ್ಯಕ್ಕೆ ಹೊಡದಾಡಿ ಸತ್ತವರ ಕzsಥ್ರಸಂಗದ ಶಬ್ದ, ವೇಶ್ಯಾಂಗನೆಯರ ರಾಗ ಮೊದಲಾಗಿ ಭವದ ಕುಶಬ್ದಕ್ಕೆ ಎಳೆ ಮೃಗದೋಪಾದಿಯಲ್ಲಿ ಮೋಹಿಸಿ, ಭ್ರಷ್ಟತನದಿಂದ ತೊಳಲಿತಯ್ಯ ಎನ್ನ ಶ್ರೋತ್ರೇಂದ್ರಿಯವು. ಇಂಥ ಕುಶಬ್ದರ ಸಂಗದಿಂದ ನಿಮ್ಮ ಶರಣರ ಮಹತ್ವದ ಮಹಾಘನ ಶಬ್ದವ ಮರದೆನಯ್ಯ. ಮಂತ್ರಮೂರ್ತಿ ಸರ್ವ ಸೂತ್ರಾಧಾರ ಪರಬ್ರಹ್ಮವೆ ಎನ್ನಪರಾಧವ ನೋಡದೆ, ನಿಮ್ಮ ಸದ್ಭಕ್ತ ಶರಣಗಣಂಗಳ ವಚನಾಮೃತವ ಕೇಳಿ ಬೆರಗು ನಿಬ್ಬೆರಗಾಗುವಂತೆ ಮಾಡಯ್ಯ ಕರುಣಾಂಬುಧಿ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಅಯ್ಯಾ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಕಶ್ಯಪ ಭಾರದ್ವಾಜ ಮೊದಲಾದ ನೂರೊಂದು ಕುಲ, ಹದಿನೆಂಟು ಜಾತಿಯವರೊಳಗಾಗಿ ಯೌವನದ ಸ್ತ್ರೀಯರ ಕಂಡು, ಸಂಪಿಗೆ ಪುಷ್ಪಕ್ಕೆ ಭ್ರಮರನಿಚ್ಫೈಸುವಂತೆ ಕಾಮವಿಕಾರದಿಂದ, ಮೊಲಕ್ಕೆ ನಾಯಿ ಹಂಬಲಿಸಿದಂತೆ, ಮಾಂಸಕ್ಕೆ ಹದ್ದು ಎರಗಿದಂತೆ, ಸತ್ತ ದನವ ನರಿ ಕಾಯ್ದುಕೊಂಡಂತೆ, ಹೆಣ್ಣು ನಾಯಿ ಗಂಡು ನಾಯಿ ಕೂಟವ ಕೂಡಿ ಪಿಟ್ಟಿಸಿಕ್ಕಿ ಒರಲುವಂತೆ, ಮನ್ಮಥರತಿಸಂಗದಿಂದ, ಜನನದ ತಾಯಿಯೆನ್ನದೆ, ಅತ್ತಿಗೆ ನಾದಿನಿಯೆನ್ನದೆ, ಅಕ್ಕತಂಗಿಯೆನ್ನದೆ, ನಡತೆಯ ಒಡಹುಟ್ಟಿದವರೆನ್ನದೆ, ಅತ್ತೆ ಸೊಸೆಯೆನ್ನದೆ, ಮಗಳು ಮೊಮ್ಮಗಳೆನ್ನದೆ, ಅಜ್ಜಿ ಆಯಿಯೆನ್ನದೆ ಪಿಶಾಚರೂಪತಾಳಿ ಉಚ್ಚೆಯ ಬಚ್ಚಲಿಗೆ ಹೊಡದಾಡಿ ಸತ್ತಿತಯ್ಯ ಎನ್ನ ಗುಹ್ಯೇಂದ್ರಿಯವು. ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ ಶಿವಶರಣ ಶಂಕರದಾಸಿಮಯ್ಯನ ದಾಸಿಯ ದಾಸನ ಮಾಡಿ ಸಲಹಯ್ಯ. ಕಾರುಣ್ಯಸಾಗರ, ಪರಮಾನಂದಮೂರ್ತಿ, ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಅನಾದಿ ಮಹಾಪ್ರಭು ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ ಚಿದ್ಬ್ರಹ್ಮ ಚಿದೈಶ್ವರ್ಯ ನೋಡ. ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿರ್ಪುದಯ್ಯ. ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ, 'ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ, ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.' ಎಂದು ಅಭಿವಂದಿಸಲು, ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ, ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ, ಪಾಪಹರಭಸಿತವೆನಿಸಿಕೊಟ್ಟರು ನೋಡ. ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ ಯೋಗ್ಯವೆಂದೆನಿಸಿದರಯ್ಯ. ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ ಪಂಚಾಮೃತವೆಂದೆನಿಸಿದರಯ್ಯ. ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ. ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು ಭುಂಜಿಸುವಂತೆ ಮಾಡಿದರಯ್ಯ. ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ. ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ, ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ, ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ ಚಿದ್ವಿಭೂತಿಯಿದೆಂದು ನಿರಂತರ ಸ್ನಾನ ಧೂಳನ-ಧಾರಣವ ಮಾಡಿದರು ನೋಡ. ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ, ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ ನಿಜನಿಷೆ*ಯಿಂದ ಲಿಂಗಾರ್ಪಿತವ ಮಾಡಿದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನಷ್ಟು ... -->